Publish Date: Tue, 21 Nov 2023 (15:42 IST)
Updated Date: Tue, 21 Nov 2023 (16:14 IST)
ಊಟದಲ್ಲಿ ಹುಳು ಇತ್ತು ಎಂಬ ಕಾರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.ಹಾಸ್ಟೆಲ್ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.ಮೂಲಭೂತ ಸೌಕರ್ಯ ಸರಿಯಾಗಿ ಒದಗಿಸ್ತಿಲ್ಲ.ವಿದ್ಯಾರ್ಥಿಗಳ ಮೇಲೆ ಗೂಂಡಾ ರೀತಿಯ ವರ್ತನೆ ಮಾಡ್ತಾರೆ.
ಹೊಸದಾಗಿ ಬಂದಂತ ವಿದ್ಯಾರ್ಥಿಗಳಿಗೆ ಹೊಸದಾಗಿ ಯಾವುದೇ ಬೆಡ್ ಕೊಟ್ಟಿಲ್ಲ.ಶೌಚಾಲಯ ಸರಿಯಾಗಿ ಇಲ್ಲ.650 ವಿದ್ಯಾರ್ಥಿಗಳು ಇರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಕೊಡ್ತಿಲ್ಲ.ವಿದ್ಯಾರ್ಥಿಗಳ ಮೇಲೆ ಅಸಭ್ಯ ವರ್ತನೆ ತೋರುತ್ತಾರೆ .ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ಬಿಟ್ಟು ಬೇರೆ ಬೇರೆ ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿದೆ ಅಂದ ವಿದ್ಯಾರ್ಥಿಗಳಿಗೆ ಸರಿಯಾದ ಊಟ ಕೊಡ್ತಿಲ್ಲ.ಈ ಬಗ್ಗೆ ಬೆಂಗಳೂರು ವಿವಿ ಕುಲಪತಿಗಳ ಗಮನಕ್ಕೆ ತಂದಿದ್ರು ಯಾವುದೇ ಪ್ರಯೋಜನ ಇಲ್ಲ ಎಂದು ಹಾಸ್ಟೆಲ್ ವಾರ್ಡನ್ ಪ್ರಭಾಕರ್ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.