Publish Date: Fri, 16 Dec 2022 (20:35 IST)
Updated Date: Fri, 16 Dec 2022 (20:40 IST)
ಬಿಜೆಪಿಯವರು ಯಾವುದೋ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಾಗ ಕುಕ್ಕರ್ ಬ್ಲಾಸ್ಟ್, ಉಗ್ರರು ಇಂಥವೆಲ್ಲ ಬೆಳಕಿಗೆ ಬರುತ್ತವೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ ಅಧ್ಯಕ್ಷರು ಹೇಳಿಕೆ ಕೊಟ್ಟಾಗ ನಾನೂ ಇದ್ದೆ. ಇಂತಹ ಘಟನೆಗಳು ಬೆಳಕಿಗೆ ಬರೋದು ಯಾವಾಗಾ,ಬಿಜೆಪಿಯವರು ಯಾವುದೋ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಾಗ ಇಂತವೆಲ್ಲ ಬೆಳಕಿಗೆ ಬರುತ್ತವೆ. ಬಹಳ ತರಾತುರಿಯಲ್ಲಿ ತನಿಖೆ ಮಾಡದೆಯೇ ಹೇಗೆ ಘೋಷಣೆ ಮಾಡ್ತಾರೆ ಅಂತ ಅಧ್ಯಕ್ಷರು ಕೇಳಿದ್ದಾರೆ.ಹೋಂ ಮಿನಿಸ್ಟರ್ ಅವರ ತಾಲೂಕಿನಲ್ಲಿಯೇ ಆ ಹುಡುಗ ಹೋಗಿ ತರಬೇತಿ ತಗೊಂಡಿರೋದಲ್ವಾ? ಇಂಟೆಲೆಜೆನ್ಸ್ ಏನು ಮಾಡ್ತಾ ಇದೆ. ? ಅವರ ಬೆನ್ನು ಅವರೇ ಚಪ್ಪರಿಸಿಕೊಳ್ತಾ ಇದ್ದಾರೆ.ಇಂಟೆಲೆಜೆನ್ಸ್ ಕಂಪ್ಲೀಟ್ ಫೇಲ್ ಆಗ್ತಾ ಇದೆ ಎಂದು ಡಿಕೆಶಿವಕುಮಾರ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ್ರು.