Webdunia - Bharat's app for daily news and videos

Install App

ಮೋದಿಗೆ ನಾಗಮಂಗಲ ಮಾತ್ರ ಕಾಣುತ್ತಾ, ಮುನಿರತ್ನ ಕಾಣಲ್ವಾ: ಪ್ರಿಯಾಂಕ್ ಖರ್ಗೆ ಟಾಂಗ್

Krishnaveni K
ಸೋಮವಾರ, 16 ಸೆಪ್ಟಂಬರ್ 2024 (13:02 IST)
ಬೆಂಗಳೂರು: ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಬಗ್ಗೆ ಕಾಮೆಂಟ್ ಮಾಡಿರುವ ಪ್ರಧಾನಿ ಮೋದಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ. ಮೋದಿಗೆ ನಾಗಮಂಗಲ ಗಲಭೆ ಮಾತ್ರ ಕಾಣುತ್ತಾ, ಮುನಿರತ್ನ ಕಾಣಲ್ವಾ ಎಂದಿದ್ದಾರೆ.

ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಬಗ್ಗೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಕರ್ನಾಟಕದಲ್ಲಿ ಗಣೇಶನನ್ನು ಅರೆಸ್ಟ್ ಮಾಡುವ ಪರಿಸ್ಥಿತಿಯಾಗಿದೆ ಎಂದು ಮೋದಿ ವ್ಯಂಗ್ಯ ಮಾಡಿದ್ದರು. ಅವರ ಭಾಷಣಕ್ಕೆ ಈಗ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

‘ಮೋದಿ ಈಗ ಕರ್ನಾಟಕದ ಗಣೇಶನ ಮೂರ್ತಿ ಬಗ್ಗೆಯೂ ಮಾತನಾಡಲು ಶುರು ಮಾಡಿದ್ದಾರೆ. ಅವರಿಗೆ ಅರಿವಿಲ್ವಾ? ಇದೇ ಬಿಜೆಪಿ ಶಾಸಕ ಮುನಿರತ್ನ ಬಂಧಿತರಾಗಿದ್ದಾರಲ್ವಾ? ಅದರ ಬಗ್ಗೆ ಕಾಣಲ್ವಾ’ ಎಂದು ಕಿಡಿ ಕಾರಿದ್ದಾರೆ. ಇನ್ನು ಬಿಜೆಪಿಯವರಿಗೆ ಎಲ್ಲಿ ಕೋಮುಗಲಭೆಯಾಗುತ್ತದೋ ಅಲ್ಲಿ ಬೇಳೆ ಬೇಯಿಸುವುದೇ ಕೆಲಸ ಎಂದಿದ್ದಾರೆ.

‘ಬಿಜೆಪಿಯವರು ಈಗ ಸತ್ಯಶೋಧನಾ ಸಮಿತಿ ಮಾಡಿ ನಾಗಮಂಗಲಕ್ಕೆ ಹೋಗ್ತಾರಂತೆ. ಇದಕ್ಕೆ ಮೊದಲು ರಾಜ್ಯದಲ್ಲಿ ಬರಗಾಲ ಬಂದಾಗ, ಅತಿವೃಷ್ಟಿ ಬಂದಾಗ ಹೋಗಿದ್ದಾರಾ? ಎಲ್ಲಿ ಕೋಮುಗಲಭೆಯಾಗುತ್ತದೋ ಅಲ್ಲಿ ಹೋಗಿ ಬೇಳೆ ಬೇಯಿಸುವುದೇ ಕೆಲಸ. ನಾಗಮಂಗಲದಲ್ಲಿ ಘಟನೆಯಾಗಿದೆ. ಇದರ ಬಗ್ಗೆ ತನಿಖೆ ಮಾಡ್ತಿದ್ದೀವಿ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹನಿಮೂನ್​ಗೆ ಹೋದ ನವಜೋಡಿ ನಾಪತ್ತೆ: ಕಮರಿನಲ್ಲಿ ಗಂಡನ ಶವ ಪತ್ತೆ, ಪತ್ನಿಗಾಗಿ ಮುಂದುವರಿದ ಹುಡುಕಾಟ

ಅರಾಂಬೈ ಬಂಧನ ಬೆನ್ನಲ್ಲೆ ಮಣಿಪುರದಲ್ಲಿ ಹಿಂಸಾಚಾರ: ಹಲವೆಡೆ ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ

Karnataka weather: ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬಿ.ಎಸ್‌.ಯಡಿಯೂರಪ್ಪ ಮೊಮ್ಮಗನ ಆರತಕ್ಷತೆಗೆ ಗಣ್ಯರ ದಂಡು: ಉಪರಾಷ್ಟ್ರಪತಿ, ರಾಜ್ಯಪಾಲ ಸಿ.ಎಂರಿಂದ ಶುಭಹಾರೈಕೆ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

ಮುಂದಿನ ಸುದ್ದಿ
Show comments