Publish Date: Thu, 09 Jul 2020 (15:10 IST)
Updated Date: Thu, 09 Jul 2020 (15:11 IST)
ಪ್ರೀತಿ ಮಾಡು, ಮದುವೆ ಆಗು ಅಂತೆಲ್ಲಾ ಬಹುದಿನಗಳಿಂದ ಬೆನ್ನುಬಿದ್ದಿದ್ದ ಹುಡುಗನೊಬ್ಬನ ನಡೆಯಿಂದಾಗಿ ಹುಡುಗಿ ಮಾಡಬಾರದ ಕೆಲಸ ಮಾಡಿದ್ದಾಳೆ.
ಯುವಕನೊಬ್ಬನ ಕಾಟಕ್ಕೆ ಬೇಸತ್ತು 17 ವರ್ಷದ ಸರಿತಾ ರಾಠೋಡ್ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದೇ ತಾಂಡಾದ ಶ್ರೀನಿವಾಸ ದೇವುಜಿ ಚವ್ಹಾಣ ಎಂಬಾತ ಪ್ರೀತ್ಸೆ ಎಂದು ಹುಡುಗಿಯ ಬೆನ್ನು ಬಿದ್ದಿದ್ದ ಎನ್ನಲಾಗಿದೆ.
ಕಲಬುರಗಿಯ ಕಾಳಗಿ ತಾಲೂಕಿನ ಬುಗಡಿ ತಾಂಡಾದಲ್ಲಿ ಘಟನೆ ನಡೆದಿದ್ದು, ರಟಕಲ್ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿಯನ್ನು ಬಂಧನ ಮಾಡಿದ್ದಾರೆ.