Webdunia - Bharat's app for daily news and videos

Install App

ಪ್ರಜ್ವಲ್ ರೇವಣ್ಣಗೆ ಜುಲೈ 30 ಮಹತ್ವದ ದಿನ: ಮಗನಿಗಾಗಿ ರೇವಣ್ಣ ಭೀಷ್ಮ ಪ್ರತಿಜ್ಞೆ

Krishnaveni K
ಶನಿವಾರ, 19 ಜುಲೈ 2025 (10:56 IST)
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 30 ಕ್ಕೆ  ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಇದೀಗ ಮಗನಿಗಾಗಿ ಎಚ್ ಡಿ ರೇವಣ್ಣ ಭೀಷ್ಮ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ.

ಹಾಸನದ ತೋಟದ ಮನೆ, ಸಂಸದರ ನಿವಾಸ ಸೇರಿದಂತೆ ಹಲವು ಕಡೆ ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರವೆಸಗಿದ ಆರೋಪದಡಿ ಬಂಧನವಾಗಿ ವರ್ಷವೇ ಕಳೆದಿದೆ.  ಈಗಾಗಲೇ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಎರಡೂ ಕಡೆ ಲಾಯರ್ ಗಳು ವಾದ-ಪ್ರತಿವಾದ ಮಂಡಿಸಿದ್ದಾಗಿದೆ.

ಇದೀಗ ತೀರ್ಪಿನ ಸಮಯ. ಜುಲೈ 30 ಕ್ಕೆ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಲಿದೆ. ಇದೀಗ ಪ್ರಜ್ವಲ್ ಮಾತ್ರವಲ್ಲ ರೇವಣ್ಣ ಕುಟುಂಬಕ್ಕೇ ಎದೆಯೊಳಗೆ ಢವ ಢವ ಶುರುವಾಗಿದೆ. ತೀರ್ಪು ಏನಾಗುವುದೋ ಎಂಬ ಆತಂಕವಿದೆ.

ಈ ನಡುವೆ ಮಗನಿಗಾಗಿ ಎಚ್ ಡಿ ರೇವಣ್ಣ ಶಪಥವೊಂದನ್ನು ಮಾಡಿದ್ದಾರೆ. ಎಚ್ ಡಿ ರೇವಣ್ಣ ಸ್ವಲ್ಪ ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿ. ಈಗ ಮಗನ ಬಿಡುಗಡೆಗಾಗಿ ದೇವರ ಮೊರೆ ಹೋಗಿದ್ದು ಮಗ ಬಿಡುಗಡೆಯಾಗುವವರೆಗೂ ಮಾಂಸ ಮುಟ್ಟಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಪ್ರಜ್ವಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ ಕನಿಷ್ಠ 10 ವರ್ಷ ಅಥವಾ ಗರಿಷ್ಠ ಜೀವಾವಧಿ ಶಿಕ್ಷೆಗೂ ಒಳಗಾಗಬಹುದು. ಹೀಗಾಗಿ ರೇವಣ್ಣ ಕುಟುಂಬದಲ್ಲಿ ಆತಂಕವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೆರೆಮನೆಯವಳನ್ನು ಎಳೆದಾಡಿ ಹಲ್ಲೆ ಮಾಡಿದ ಮೊಹಮ್ಮದ್ ಶಮಿ ಮಾಜಿ ಪತ್ನಿ: ವಿಡಿಯೋ ವೈರಲ್

ಬಿಕ್ಲು ಶಿವು ಮರ್ಡರ್ ಕೇಸ್: ಬೈರತಿ ಬಸವರಾಜು ಬಂಧಿಸಲು ಪೊಲೀಸರಿಗೆ ಸಿಕ್ಕಿದೆ ಅಸ್ತ್ರ

ಬಿಜೆಪಿ ಶಾಸಕರಿಗೆ ಯಾಕೆ ಕಡಿಮೆ ಅನುದಾನ: ಬಿವೈ ವಿಜಯೇಂದ್ರ ರೋಷಾವೇಷ

ಶಾಸಕರ ಅಸಮಾಧಾನ ತೀರಿಸಲು ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ ಪ್ರಕಾರ ಹೃದಯದ ಆರೋಗ್ಯ ಚೆನ್ನಾಗಿರಬೇಕಾದರೆ ಈ 5 ಸರಿಯಾಗಿರಬೇಕು

ಮುಂದಿನ ಸುದ್ದಿ