Select Your Language

Notifications

webdunia
webdunia
webdunia
webdunia

ನೀರಿನ ವಿಚಾರದಲ್ಲಿ ರಾಜಕೀಯ : ಜಾರಕಿಹೊಳಿ ಹೇಳಿದ್ದೇನು?

ನೀರಿನ ವಿಚಾರದಲ್ಲಿ ರಾಜಕೀಯ : ಜಾರಕಿಹೊಳಿ ಹೇಳಿದ್ದೇನು?
ಹಾಸನ , ಗುರುವಾರ, 7 ಮೇ 2020 (18:13 IST)
ಸರ್ಕಾರ ಬಹು ಮಹಾತ್ವಕಾಂಕ್ಷೆ ಯೋಜನೆಯ ಸ್ಥಳಕ್ಕೆ ಜಲ ಸಂಪನ್ಮೂಲ ಸಚಿವರು ಭೇಟಿ ನೀಡಿದ್ದರು.

ಸಚಿವ ರಮೇಶ್ ಜಾರ್ಕಿಹೊಳಿ ಹೇಳಿಕೆ ನೀಡಿದ್ದು, ಯೋಜನೆ ರೈತರ ಭೂ ಸ್ವಾಧಿನ ಬಗ್ಗೆ ಸಧ್ಯದಲ್ಲೆ ಸಭೆ ಮಾಡಿ ಸಮಸ್ಯೆ ಬಗೆ ಹರಿಸಲಾಗುವುದು. ಮುಂದಿನ ಮಾರ್ಚ್ ತಿಂಗಳಿಗೆ 37 km ನೀರು ಹರಿಸೋ ಉದ್ದೇಶ ಇದೆ . ಕೊರೊನಾ ಬಂದಿದ್ದು ಯೋಜನೆಗೆ ಸಮಸ್ಯೆ ತಂದಿದೆ ಎಂದರು.

ಈಗ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದ ಅವರು, ನೀರಿನ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದಿದ್ದಾರೆ.
ಇನ್ನು, ಉತ್ತರ ಕರ್ನಾಟಕಕ್ಕೆ ಎತ್ತಿನಹೊಳೆ ಯೋಜನೆಯ ನೀರು ಬಳಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಉತ್ತರ ಕರ್ನಾಟಕ ಬೇರೆ, ಇದು ಬೇರೆ ಎಂಬುದಿಲ್ಲ ರಾಜ್ಯವನ್ನ ಒಂದೇ ದೃಷ್ಟಿಯಿಂದ ನೋಡುತ್ತೇವೆ. ಎತ್ತಿನ ಹೊಳೆಯೋಜನೆಗೆ ಇನ್ನು ಎಷ್ಟು ಹಣ ಬೇಕು ಅನ್ನೋದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿ ಕೈವಾಡ : ಹೆತ್ತವರ ಮಡಿಲು ಸೇರಿದ ರಾಜಸ್ಥಾನದ ಬಾಲಕರು