Select Your Language

Notifications

webdunia
webdunia
webdunia
webdunia

ಒಂದು ದಿನ ತಡಮಾಡಿ 10 ಸಾವಿರ ಕೋಟಿ ರೂ. ಕೊಟ್ಟ ಯಡಿಯೂರಪ್ಪ

ಒಂದು ದಿನ ತಡಮಾಡಿ 10 ಸಾವಿರ ಕೋಟಿ ರೂ. ಕೊಟ್ಟ ಯಡಿಯೂರಪ್ಪ
ಬೆಂಗಳೂರು , ಶುಕ್ರವಾರ, 6 ಮಾರ್ಚ್ 2020 (15:50 IST)
ರಾಜ್ಯ ಬಜೆಟ್ ನಲ್ಲಿ ಕಾಣಿಸಿಕೊಳ್ಳದಿದ್ದ ಯೋಜನೆಯೊಂದಕ್ಕೆ ಸಿಎಂ ಒಂದು ದಿನ ತಡವಾಗಿ 10 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು 10 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡಿದೆ.

ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಹಾಗೂ ಹಳ್ಳಿಗಳ ಪುನವರ್ಸತಿ ಹಾಗೂ ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂಪಾಯಿಗಳ ಅನುದಾನ  ನಿಗದಿಪಡಿಸಿದ್ದಾಗಿ ಘೋಷಣೆ ಮಾಡಿದರು.

ಬಜೆಟ್ ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಹೆಸರು ಪ್ರಸ್ತಾಪವೇ ಆಗಿರಲಿಲ್ಲ. ಇದರಿಂದ ಉತ್ತರ ಕರ್ನಾಟಕ ಭಾಗದ ಜನತೆ ಹಾಗೂ ಪ್ರತಿಪಕ್ಷಗಳಿಂದ ಭಾರೀ ಟೀಕೆಗೆ ವ್ಯಕ್ತವಾಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಗಲಭೆ : ಅಮಿತ್ ಷಾ ರಾಜೀನಾಮೆ?