Publish Date: Sun, 13 May 2018 (07:56 IST)
Updated Date: Sun, 13 May 2018 (07:58 IST)
ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯೇನೋ ಮುಗಿಯಿತು. ಆದರೆ ಮಂಗಳವಾರದ ಫಲಿತಾಂಶಕ್ಕಾಗಿ ಇದೀಗ ಎಲ್ಲರ ಕುತೂಹಲ ನೆಟ್ಟಿದೆ.
ಇದುವರೆಗೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ರಾಜಕೀಯ ನಾಯಕರು ಇನ್ನೆರಡು ದಿನ ಕೊಂಚ ಸುಧಾರಿಸಿಕೊಳ್ಳಬಹುದಾಗಿದೆ. ನಿರ್ಣಯವನ್ನು ಮತದಾರ ಈಗಾಗಲೇ ಬರೆದಾಗಿದೆ. ಅದರ ಫಲಿತಾಂಶ ಮಂಗಳವಾರ ತಿಳಿಯಲಿದೆ.
ಹೀಗಾಗಿ ರೆಸ್ಟ್ ಜತೆಗೇ ಕೊಂಚ ಟೆನ್ ಷನ್ ಕೂಡಾ ಎದೆಯಲ್ಲಿ ಆರಂಭವಾಗಿರುತ್ತದೆ. ಮಂಗಳವಾರ ಬರುವ ಫಲಿತಾಂಶದಲ್ಲಿ ಯಾವ ಪಕ್ಷ ಗೆಲ್ಲಬಹುದು, ತಮಗೆ ಮತದಾರ ಒಲವು ತೋರಿದ್ದಾನೆಯೇ ಎಂಬ ಟೆನ್ ಷನ್ ನಲ್ಲಿ ರಾಜಕಾರಣಿಗಳು ಇನ್ನೆರಡು ದಿನ ಕಳೆಯಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.