Select Your Language

Notifications

webdunia
webdunia
webdunia
webdunia

ಶೀರೂರು ಮಠದ ಬಾವಿಯಲ್ಲಿ ಅಡಗಿತ್ತಾ ಸುಳಿವು?!

ಶೀರೂರು ಮಠದ ಬಾವಿಯಲ್ಲಿ ಅಡಗಿತ್ತಾ ಸುಳಿವು?!
ಉಡುಪಿ , ಮಂಗಳವಾರ, 24 ಜುಲೈ 2018 (09:47 IST)
ಉಡುಪಿ: ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಅನುಮಾನಾಸ್ಪದ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಾವಿಯೊಳಗೆ ಕೆಲವು ವಸ್ತುಗಳು ಸಿಕ್ಕಿವೆ ಎನ್ನಲಾಗಿದೆ.

ಕೃಷ್ಣ ಮಠ ಮತ್ತು ಶೀರೂರು ಮಠದ ಬಳಿಯ ಬಾವಿಯಲ್ಲಿ ಶೋಧ ನಡೆಸಿದ ಪೊಲೀಸರಿಗೆ ಕೆಲವು ವಸ್ತುಗಳು ಸಿಕ್ಕಿದ್ದು, ಇದನ್ನು ತನಿಖೆಗಾಗಿ ಚೀಲದಲ್ಲಿ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ ಬಾವಿಯೊಳಗೆ ಮದ್ಯದ ಬಾಟಲಿಗಳೂ ಸಿಕ್ಕಿವೆ ಎನ್ನಲಾಗಿದೆ.

ಆದರೆ ತನಿಖೆಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಇದರ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಸೋರಿಕೆಯಾಗದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಮಠದ ಸಿಸಿಟಿವಿ ಫೂಟೇಜ್ ಗಳನ್ನೂ ಪೊಲೀಸರು ಪಡೆದಿದ್ದಾರೆಎನ್ನಲಾಗಿದೆ. ಶ್ರೀಗಳ ಅನುಮಾಸ್ಪದ ಸಾವಿನ ಬಗ್ಗೆ ಇನ್ನೂ ತನಿಖೆ ಮುಂದುವರಿಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ‘ಅಪ್ಪುಗೆ’ ಟೀಕಿಸಿದ ಆರ್ ಜೆಡಿ ವಕ್ತಾರನಿಗೆ ಗೇಟ್ ಪಾಸ್