Select Your Language

Notifications

webdunia
webdunia
webdunia
webdunia

ಯಲ್ಲಾಪುರ ವಿದ್ಯಾರ್ಥಿಗಳ ಪೋಷಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇಕೆ ಗೊತ್ತಾ?

ಯಲ್ಲಾಪುರ ವಿದ್ಯಾರ್ಥಿಗಳ ಪೋಷಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇಕೆ ಗೊತ್ತಾ?
ಬೆಂಗಳೂರು , ಬುಧವಾರ, 14 ನವೆಂಬರ್ 2018 (09:55 IST)
ಬೆಂಗಳೂರು: ಏನೇ ಸಮಸ್ಯೆಗಳಿದ್ದರೂ ಇತ್ತೀಚೆಗೆ ಪ್ರಧಾನಿ ಮೋದಿಗೆ ಸಾಮಾಜಿಕ ಜಾಲತಾಣಗಳ ಮೂಲಕವೋ ಪತ್ರ ಮುಖೇನವೋ ವಿದ್ಯಾರ್ಥಿಗಳು, ಸಾಮಾನ್ಯರು ಮನವಿ ಮಾಡುವುದು ಸಾಮಾನ್ಯವಾಗಿದೆ.

ಕೆಲವೊಮ್ಮೆ ಖುದ್ದು ಪ್ರಧಾನಿ ಮೋದಿ ಇದಕ್ಕೆ ಉತ್ತರಿಸಿ ಪರಿಹಾರ ನೀಡಿದ್ದೂ ಇದೆ. ಇದೀಗ ತುಮಕೂರಿನ ಯಲ್ಲಾಪುರದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳು ಕಲಿಯುತ್ತಿರುವ ಇಲ್ಲಿನ ಕೇಂದ್ರೀಯ ವಿದ್ಯಾಲಯದ ವಿರುದ್ಧ ಪತ್ರ ಮುಖೇನ ಪ್ರಧಾನಿ ಮೋದಿಗೆ ದೂರು ನೀಡಿದ್ದಾರೆ.

ಇಲ್ಲಿ ಶಿಕ್ಷಕರ ಕೊರತೆಯಿದೆ. ಕನ್ನಡ ಕಲಿಸುವ ಶಿಕ್ಷಕರೇ ಇಂಗ್ಲಿಷ್ ಕಲಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪ್ರಶ್ನಿಸಿದರೆ ಟಿಸಿ ತೆಗೆದುಕೊಂಡು ಹೋಗಿ. ಹೈ ಟೆಕ್ ಶಿಕ್ಷಣ ಬೇಕೆಂದರೆ ಬೇರೆ ಶಾಲೆಗೆ ಹೋಗಿ ಎಂದು ಶಿಕ್ಷಕರು ಉತ್ತರಿಸುತ್ತಾರೆ ಎಂದು ಪೋಷಕರು ಪತ್ರದಲ್ಲಿ ಆರೋಪಿಸಿದ್ದಾರೆ. ಇದೀಗ ಪ್ರಧಾನಿ ಇದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಮೇಲಿನ ಸಿಟ್ಟಿಗೆ ಮೂವರು ಮಕ್ಕಳಿಗೆ ಈತ ನೀಡಿದ ಶಿಕ್ಷೆ ಕೇಳಿದರೆ ಶಾಕ್ ಆದೀತು!