Select Your Language

Notifications

webdunia
webdunia
webdunia
webdunia

ಏಕತಾ ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ಹೇಳಿದ್ದೇನು?

ಏಕತಾ ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ಹೇಳಿದ್ದೇನು?
ನರ್ಮದಾ , ಬುಧವಾರ, 31 ಅಕ್ಟೋಬರ್ 2018 (11:23 IST)
ನರ್ಮದಾ: ಗುಜರಾತ್ ನ ನರ್ಮದಾದಲ್ಲಿ ಸ್ವತಂತ್ರ ಭಾರತದ ಶಿಲ್ಪಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.

ತುಂಡು, ತುಂಡಾಗಿ ವಿಭಜನೆಯಾಗಿದ್ದ ಭಾರತವನ್ನು ಒಗ್ಗೂಡಿಸಿದ ಈ ಮಹಾನ್ ನಾಯಕನನ್ನು ನಾವು ಯಾವತ್ತೂ ಮರೆಯಬಾರದು. ದೇಶವನ್ನು ವಿಭಜಿಸುವ ಪ್ರಯತ್ನವನ್ನು ವಿಫಲಗೊಳಿಸಿದವರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಪ್ರತಿಮೆ ಅನಾವರಣಗೊಳಿಸದ ಬಳಿಕ ದೇಶದ ಏಕತೆಗೆ ಜಿಂದಾಬಾದ್, ಸರ್ದಾರ್ ಪಟೇಲ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಧಾನಿ ಮೋದಿ, ‘ನಾನು ಈ ಯೋಜನೆಯನ್ನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಮಾಡಬೇಕೆಂದಿದ್ದೆ. ಆದರೆ ಪ್ರಧಾನಿಯಾಗಿ ಪೂರ್ಣಗೊಳಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ತಾಯಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದರೆ ಪುತ್ರನ ತಾಕತ್ತು ಹೆಚ್ಚುತ್ತದೆ. ಹಾಗೆಯೇ ನನಗೆ ನರ್ಮದಾ ತಾಯಿಯ ಆಶೀರ್ವಾದ ಸಿಕ್ಕಿದೆ’ ಎಂದಿದ್ದಾರೆ.

ಅಲ್ಲದೆ ಈ ದಿನವನ್ನು ದೇಶ ಯಾವತ್ತೂ ಮರೆಯಲಾಗದು. ದೇಶದಾದ್ಯಂತ ಇಂದು ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಇಂದಿನ ಏಕತಾ ದಿನ ಆಚರಿಸುತ್ತಿರುವ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ ಎಂದರು.

ಅಂದು ಸರ್ದಾರರು ದೇಶವನ್ನು ಒಗ್ಗೂಡಿಸದೇ ಇದ್ದಿದ್ದರೆ ಇಂದು ಹೈದರಾಬಾದ್ ನ ಚಾರ್ ಮೀನಾರ್ ನೋಡಲು ಗುಜರಾತ್ ನ ಸೋಮನಾಥನ ದರ್ಶನ ಪಡೆಯಲು ವೀಸಾ ಪಡೆಯಬೇಕಿತ್ತು. ಆದರೆ ಸರ್ದಾರರ ಹೋರಾಟದಿಂದ, ಶ್ರಮದಿಂದ ಈ ದೇಶ ಒಂದೇ ದೇಶವಾಗಿ ರೂಪುಗೊಂಡಿತು. ಈ ಪ್ರತಿಮೆ ಅವರ ಪರಿಶ್ರಮದ, ತ್ಯಾಗದ ಸಂಕೇತ. ಇದು ನವಭಾರತದ, ಭಾರತದ ಅಸ್ಥಿತ್ವವನ್ನು ಪ್ರಶ್ನಿಸುವವರಿಗೆ ಉತ್ತರ ನೀಡುವ, ರೈತರ ಸ್ವಾಭಿಮಾನದ ಪ್ರತೀಕ ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏಕತಾ ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ಹೇಳಿದ್ದೇನು?