Select Your Language

Notifications

webdunia
webdunia
webdunia
webdunia

ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ-ಬಿಜೆಪಿ ಅಂದ್ರೇನೆ ಸುಳ್ಳಿನ ಕಾರ್ಖಾನೆ- ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ-ಬಿಜೆಪಿ ಅಂದ್ರೇನೆ ಸುಳ್ಳಿನ ಕಾರ್ಖಾನೆ- ಸಿದ್ದರಾಮಯ್ಯ
mangalore , ಗುರುವಾರ, 5 ಜನವರಿ 2023 (16:08 IST)
ಸಿಎಂ ಬಸವರಾಜ್ ಬೊಮ್ಮಾಯಿಯನ್ನ ನಾಯಿಮರಿಗೆ ಹೋಲಿಸಿರುವ ವಿಚಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
 
ನಾನು ಸದುದ್ದೇಶದಿಂದ ಹೇಳಿದ್ದೇನೆ.ರಾಜ್ಯದ ಹಿತದೃಷ್ಟಿಯಿಂದ ಧೈರ್ಯ ತೋರಿಸಬೇಕೆದು ಹೇಳಿದ್ದೇನೆ.ಕೇಂದ್ರ ಸರ್ಕಾರದಿಂದ ಅನುದಾನ ಸರಿಯಾಗಿ ಬಂದಿಲ್ಲ.ಅನುದಾನ ಎಲ್ಲಾ ಕಡಿಮೆಯಾಗಿದೆ.ಆ ಅರ್ಥದಲ್ಲಿ ಹೇಳಿದ್ದೇನೆ ಹೊರತು ಬೇರೆ ಕಾರಣಕ್ಕೆ ಅಲ್ಲಾ ಎಂದು ಸಿದ್ದರಾಮಯ್ಯ ಹೇಳಿದ್ದು,ನಾಯಿಮರಿಗೆ ಪ್ರತಿಯಾಗಿ ಶ್ರೀರಾಮುಲು ಬೆಕ್ಕು, ಇಲಿಗೆ ಹೋಲಿಸಿದ ವಿಚಾರವಾಗಿ ಶ್ರೀರಾಮುಲು ಹೆಸರು ಹೇಳುತ್ತಿದ್ದಂತೆ ಸಿದ್ದರಾಮಯ್ಯ ಗರಂ ಆದ್ರು.ಅವನ್ಯಾರ್ರೀ ಪೆದ್ದ.. ಅವನ ಬಗ್ಗೆ ಮಾತನ್ನಾಡೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.
 
ಈ ವೇಳೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಎಫ್ಐ ಸಂಘಟನೆ ವಿರುದ್ಧದ ಮೊಕದ್ದಮೆ ಹಿಂಪಡೆದಿದೆ ಎಂಬ ಕಟೀಲ್ ಹೇಳಿಕೆ ವಿಚಾರವಾಗಿಯೂ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿ ಅಂದ್ರೇನೆ ಸುಳ್ಳಿನ ಕಾರ್ಖಾನೆ.ಸುಳ್ಳು ಹೇಳೋದೆ ಅವರ ವೃತ್ತಿ.ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲರೂ ಸುಳ್ಳು ಹೇಳೋದೆ ಎಂದು  ಸಿದ್ದು ವಾಗ್ದಾಳಿ ನಡೆಸಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪ್ರಗತಿ ಪರಿಶೀಲನೆ