Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯ

ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯ
ಬಾದಾಮಿ , ಸೋಮವಾರ, 2 ಜನವರಿ 2023 (17:12 IST)
ಮಾಜಿ ಸಿಎಂ ಸಿದ್ದರಾಮಯ್ಯರವರು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಸಿದ್ದರಾಮಯ್ಯ ಸ್ವರ್ಧಿಸಲು ಯಾವುದೇ ಕ್ಷೇತ್ರ ಇನ್ನೂ ಫೈನಲ್​ ಆಗಿಲ್ಲ. ಅವರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಬಾದಾಮಿ ಸಿದ್ದರಾಮಯ್ಯರಿಗೆ ಓಡಾಡಲು ದೂರವಾಗಿದೆ. ಆದ್ದರಿಂದ ಅವರು ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಅವರಿಗೆ ಕ್ಷೇತ್ರಕ್ಕೆ ಓಡಾಡಲು ದೂರವಾದರೆ ಅಭಿಮಾನಿಗಳೆಲ್ಲಾ ಸೇರಿ ಹೆಲಿಕಾಪ್ಟರ್ ​ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ತಮ್ಮ ಕುರಿ ಮರಿ, ಹೊಲ ಮಾರಾಟ ಮಾಡಿ ಹೆಲಿಕಾಪ್ಟರ್ ಕೊಡಿಸಲು ಬಾದಾಮಿಯ ಅಭಿಮಾನಿಗಳು ಮುಂದಾಗಿದ್ದಾರೆ. ಬಾದಾಮಿ ಅಭಿಮಾನಿಗಳು ಸಿದ್ದು ಕುರಿತು ತಮ್ಮ ಮನದಾಳದ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ವೀಕ್ಷಕರ ಮುಂದೆ ಬಾದಾಮಿಯ ಸಿದ್ದು ಬೆಂಬಲಿಗರು ಪಟ್ಟು ಹಿಡಿದು ನಿಂತಿದ್ರು. ಬೇಕೆ ಬೇಕು ಸಿದ್ದರಾಮಯ್ಯ ಬೇಕು ಎಂಬ ಘೋಷಣೆಯೊಂದಿಗೆ ಬಾದಾಮಿ ಜನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದಿದ್ರು. ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಫರ್ಧೆ ಮಾಡುವಂತೆ ಒಕ್ಕೊರಲಿನ ಆಗ್ರಹ ಮಾಡಿದ್ದಾರೆ. ಸಿದ್ದು ಬಾದಾಮಿಯಿಂದ ಗೆದ್ದು ಸಿಎಂ ಆಗಲೆಂದು ಕೆಲ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊತ್ತಿ ಉರಿದ ಈಚಲ ಮರಗಳು