Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ವಸತಿ ಸಚಿವ ವಿ ಸೋಮಣ್ಣ

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ವಸತಿ ಸಚಿವ ವಿ ಸೋಮಣ್ಣ
bangalore , ಬುಧವಾರ, 4 ಜನವರಿ 2023 (15:23 IST)
ಸಿಎಂ ಬೊಮ್ಮಾಯಿ ಅವರಿಗೆ‌ ನಾಯಿಮರಿ ಎಂಬ ಪದ‌ಬಳಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಕಿಡಿಕಾರಿದ್ದಾರೆ.
 
ವಿಧಾನಸೌಧದಲ್ಲಿ  ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದು,ಸಿಎಂರನ್ನ ನಾಯಿಗೆ ಹೋಲಿಸಿದ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಆಕ್ರೋಶ  ವ್ಯಕ್ತಪಡಿಸಿದಾರೆ.2023ಕ್ಕೆ ಮತ್ತೆ ಬೊಮ್ಮಾಯಿ ಮುಖ್ಯಮಂತ್ರಿ ಆಗಲಿದ್ದಾರೆ.ಅವರ ಭಾಷೆಯನ್ನು ಅವರೇ ಕಂಟ್ರೋಲ್ ಮಾಡಿಕೊಳ್ಳೋದು ಉತ್ತಮ.ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ, ಬಿಜೆಪಿಗಷ್ಟೆ ಮುಖ್ಯಮಂತ್ರಿ ಅಲ್ಲ.ಮುಖ್ಯಮಂತ್ರಿ ಸ್ಥಾನ ಎಲ್ಲರಿಗೂ ಸಿಗಲ್ಲ.ಒಬ್ಬ ಮುಖ್ಯಮಂತ್ರಿ ಆದವರು, 13ಬಜೆಟ್ ಮಂಡಿಸಿದವರು ಇಂತಹ ಭಾಷೆಯನ್ನ  ಯಾಕೆ ಬಳಿಸ್ತಾರೋ ಗೊತ್ತಿಲ್ಲ ಎಂದು ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯಿಂದ ಮತ್ತೆ ಒತ್ತುವರಿ ತೆರವು ಕಾರ್ಯಾರಂಭ