Select Your Language

Notifications

webdunia
webdunia
webdunia
webdunia

ಮದ್ಯ ಸೇವಿಸಲು ನೂರು ರೂ. ಕೇಳಿದ್ದಕ್ಕೆ ಕೊಲೆ!

ಮದ್ಯ ಸೇವಿಸಲು ನೂರು ರೂ. ಕೇಳಿದ್ದಕ್ಕೆ ಕೊಲೆ!
ಬೆಂಗಳೂರು , ಸೋಮವಾರ, 20 ಡಿಸೆಂಬರ್ 2021 (08:13 IST)
ಬೆಂಗಳೂರು : ಮದ್ಯಪಾನ ಮಾಡಲು ನೂರು ರೂ. ಹಣ ಕೇಳಿದ್ದ ವ್ಯಕ್ತಿಯೊಬ್ಬನಿಗೆ ತೂಕ ಮಾಡುವ 1 ಕೆ. ಜಿ. ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಮೂರು ತಿಂಗಳ ಬಳಿಕ ಬಂಧಿಸಿದ್ದಾರೆ.

ಕೇರಳ ಮೂಲದ ಸಂಶೀರ್ (28) ಬಂಧಿತ ಆರೋಪಿ. ಪ್ರತೀಕ್ ಎಸ್. ಯಾದವ್ (31) ಕೊಲೆಯಾಗಿದ್ದ ಯುವಕ.

ಅಂಗಡಿಯಲ್ಲಿದ್ದ ಸಂಶೀರ್ಗೆ ಮತ್ತೆ ಮದ್ಯಪಾನ ಮಾಡಲು 100 ರೂ. ಕೊಡುವಂತೆ ಪೀಡಿಸಿದ್ದ. ಆಗ ಇಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದೆ.

ಇದರಿಂದ ಕೋಪಗೊಂಡ ಸಂಶೀರ್ ತೂಕ ಮಾಡುವ 1 ಕೆ. ಜಿ. ಕಲ್ಲಿನಿಂದ ಆತನ ತಲೆಗೆ, ಹಣೆಗೆ ಹೊಡೆದಿದ್ದ. ಗಾಯಗೊಂಡು ತೀವ್ರ ರಕ್ತಸ್ರಾವವಾದಾಗ ಮಾಲೀಕ ಸುರೇಶ್ ಇಬ್ಬರನ್ನು ಸಮಾಧಾನಪಡಿಸಿ ಪ್ರತೀಕ್ ಗಾಯಕ್ಕೆ ಬಟ್ಟೆ ಸುತ್ತಿದ್ದರು.

ನಂತರ ಮಾಲೀಕ ಸುರೇಶ್ ತಮ್ಮ ಸಹೋದರನನ್ನು ಕರೆಸಿ ಪ್ರತೀಕ್ನನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಮೃತದೇಹವನ್ನು ಯಲಹಂಕ ಸಂಚಾರಿ ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ, ಪ್ರತೀಕ್ನ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂಬ ವೈದ್ಯಕೀಯ ವರದಿ ಪೊಲೀಸರ ಕೈ ಸೇರಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೃತನನ್ನು ಆಸ್ಪತ್ರೆಗೆ ದಾಖಲಿಸಿದ ಸುಬ್ರಮಣಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಅಂದು ನಡೆದ ಘಟನೆಯನ್ನು ವಿವರಿಸಿದ್ದರು.

ಬಳಿಕ ಅಂಗಡಿ ಮಾಲೀಕ ಸುರೇಶ್ನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಸಂಶೀರ್ ಹಾಗೂ ಪ್ರತೀಕ್ ನಡುವೆ ಜಗಳವಾಗಿ ಹಲ್ಲೆ ಮಾಡಿರುವ ಸಂಗತಿ ಪೊಲೀಸರಿಗೆ ತಿಳಿದು ಬಂದಿದೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಸಂಶೀರ್ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಶತಕ ಬಾರಿಸಿದ ಕೊರೊನಾ!