Publish Date: Sun, 24 Jul 2022 (17:04 IST)
Updated Date: Sun, 24 Jul 2022 (17:22 IST)
ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಸ್ಥಾಪಿಸಿದ್ದ, ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಸುಮಾರು 105 ವರ್ಷಗಳಷ್ಟು ಹಳೆಯದಾದ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿ) -ಖಾಯಂ ಬೋಧನಾ ಸಿಬ್ಬಂದಿ ಕೊರತೆ ಎದುರಿಸುತ್ತಿದೆ
ಶಾಲೆಯಲ್ಲಿ 2,800 ಬಿಐ ಮತ್ತು 700 ಪಿಎಚ್ಡಿ ವಿದ್ಯಾರ್ಥಿಗಳು ಸುಮಾರು 4,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, 139 ಶಿಕ್ಷಕರ ಮಂಜೂರಾತಿಗೆ ಅವಕಾಶವಿದೆ, ಆದರೆ ಕೇವಲ 80 ಖಾಯಂ ಶಿಕ್ಷಕರಿದ್ದಾರೆ. 2007 ರಿಂದ ಇಲ್ಲಿಯವರೆಗೆ ಖಾಯಂ ಶಿಕ್ಷಕರನ್ನು ನೇಮಿಸಲಾಗಿಲ್ಲ.
ಜೊತೆಗೆ, ಸಂಸ್ಥೆಯಲ್ಲಿ 203 ಸಿಬ್ಬಂದಿ ಇರಬೇಕಾದ ಕಡೆ ಕೇವಲ 35 ಬೋಧಕೇತರ ಸಿಬ್ಬಂದಿಗಳಿದ್ದು, ಗುತ್ತಿಗೆ ಸಿಬ್ಬಂದಿ ಕಾಲೇಜು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಕಾಲಜಿನ ನೌಕರರು.
ಯುವಸಿ ಪ್ರಾಂಶುಪಾಲ ಎಚ್.ಎನ್.ರಮೇಶ್ ಅವರು ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸಿಬ್ಬಂದಿ ಕೊರತೆ ಕುರಿತು ಪತ್ರ ಬರೆದಿದ್ದಾರೆ. 2007 ರಿಂದ ಖಾಯಂ ಬೋಧಕ ಸಿಬ್ಬಂದಿ ಮತ್ತು 1995 ರಿಂದ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ ಎಂದು ದಿ ನ್ಯೂ ಸ್ಯಾಂಡೆ ಎಕ್ಸ್ಪ್ರೆಸ್ನಲ್ಲಿ ಪತ್ರವು ತಿಳಿಸುತ್ತದೆ. "ಪ್ರಯೋಗಾಲಯಗಳಲ್ಲಿ ಯಾವುದೇ ಅರ್ಹ ಬೋಧಕೇತರ ಸಿಬ್ಬಂದಿ ಇಲ್ಲ ಎಂದು ಪತ್ರದಲ್ಲಿಉಲ್ಲೇಖಿಸಲಾಗಿದೆ.
ಡಿಸೆಂಬರ್ 2021 ರಲ್ಲಿ, ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಬಿಲ್ 2021 ಅನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ಸಮಾನವಾಗಿ ಸ್ವಾಯತ್ತ ಸಂಸ್ಥೆಯಾಗಿ ಅಪ್ಗ್ರೇಡ್ ಮಾಡಲು ಅಂಗೀಕರಿಸಲಾಯಿತು. ಆದರೆ ರಾಜ್ಯ ಸರ್ಕಾರ ಇನ್ನೂ ನಿರ್ದೇಶಕರು, ಆಡಳಿತ ಮಂಡಳಿ ಹಾಗೂ ಸದಸ್ಯರನ್ನು ನೇಮಕ ಮಾಡಿಲ್ಲ. ಇದು ಸೆನೆಟ್ ಮತ್ತು ಕಾರ್ಯಕಾರಿ ಮಂಡಳಿಯನ್ನು ರಚಿಸುವಲ್ಲಿ ಮತ್ತು ಇತರ ಅಧಿಕಾರಿಗಳ ನೇಮಕಾತಿಯಲ್ಲಿ ಸಹಾಯ ಮಾಡುತ್ತದೆ