Publish Date: Tue, 15 Nov 2022 (17:45 IST)
Updated Date: Tue, 15 Nov 2022 (18:14 IST)
ಪಂಚರತ್ನ ರಥಯಾತ್ರೆಗೆ ನವೆಂಬರ್ 18ರಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಮಳೆಯಿಂದಾಗಿ ಕಳೆದ ಬಾರಿ ತಟಸ್ಥಗೊಂಡಿತ್ತು. ಇದೀಗ ಮತ್ತೆ ಮುಳಬಾಗಿಲಿನಿಂದಲೇ ಯಾತ್ರೆಗೆ ಮರುಚಾಲನೆ ನೀಡಲು ಪಕ್ಷ ನಿರ್ಧಾರ ಮಾಡಿದೆ. ಪಂಚರತ್ನ ರಥಯಾತ್ರೆ ಮೂಲಕ ಇಡೀ ರಾಜ್ಯಾದ್ಯಂತ ರಥಯಾತ್ರೆ ಸಂಚರಿಸಲಿದೆ. ಪಂಚ ಯೋಜನೆಗಳನ್ನ ಮುಂದಿಟ್ಟುಕೊಂಡು ಪ್ರಚಾರದ ಮೂಲಕ ಮತದಾರರನ್ನ ಸೆಳೆಯೋಕೆ ಜೆಡಿಎಸ್ ನಿರ್ಧಾರ ಮಾಡಿದೆ.