Select Your Language

Notifications

webdunia
webdunia
webdunia
webdunia

ಸಂಪುಟದಲ್ಲಿ ದೊರಕದ ಸ್ಥಾನ: ಖರ್ಗೆ ಅಸಮಧಾನ

ಸಂಪುಟದಲ್ಲಿ ದೊರಕದ ಸ್ಥಾನ: ಖರ್ಗೆ ಅಸಮಧಾನ
ಕಲಬುರಗಿ , ಭಾನುವಾರ, 23 ಡಿಸೆಂಬರ್ 2018 (15:28 IST)
ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡದಿರುವುದರ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ  ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ದೊರಕಿಸಲು ಪ್ರಯತ್ನ ಮಾಡಿದ್ದೇವು. ಆದರೆ ಸಫಲರಾಗಲಿಲ್ಲ ಎಂದ ಅವರು, ಕೆಲವು ಶಾಸಕರಿಗೆ ಒತ್ತಾಯ ಮಾಡಿದ ಮೇಲೆ ಕ್ಯಾಬಿನೆಟ್ ದರ್ಜೆ ಸ್ಥಾನ ಕೊಟ್ಟಿದ್ದಾರೆ. ಜಿಲ್ಲೆಯವರಿಗೆ ಇನ್ನೊಂದು ಸಚಿವ ಸ್ಥಾನ ಬೇಕು ಎಂದು ಪಕ್ಷದ ಪ್ರಮುಖರೊಂದಿಗೆ ಚರ್ಚೆ ಮಾಡಿದ್ದೆ ಎಂದರು. ಪಕ್ಷ ನಿರ್ಧಾರ ಮಾಡಿದ ಮೇಲೆ ಅದನ್ನು ಗೌರವಿಸುತ್ತೇನೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಸಾಲಿಸ್ ದಿನಾಚರಣೆ ನಡೆದದ್ದೆಲ್ಲಿ ಗೊತ್ತಾ?