18 ದಿನದಲ್ಲಿ ಕೇವಲ 20 ಸಾವಿರ ರೂ ಖರ್ಚಿನಲ್ಲಿ ಉತ್ತರ ಭಾರತ ಪ್ರವಾಸ ಮಾಡಿ

Krishnaveni K
ಬುಧವಾರ, 8 ಜನವರಿ 2025 (15:19 IST)
Photo Credit: X
ಬೆಂಗಳೂರು: ಉತ್ತರ ಭಾರತ ಪ್ರವಾಸ ಮಾಡಬೇಕೆಂದರೆ ಕನಿಷ್ಠ 50 ಸಾವಿರ ರೂ.ಆದರೂ ಬೇಕು ಎಂದು ಹಿಂದೇಟು ಹಾಕುತ್ತಿದ್ದೀರಾ? ಹಾಗಿದ್ದರೆ ಕೇವಲ 20 ಸಾವಿರ ರೂ. ಖರ್ಚು ಮಾಡಿ 18 ದಿನ ಉತ್ತರ ಭಾರತ ಪ್ರವಾಸ ಮಾಡಬಹುದು.

ಸರ್ಕಾರಿ ಎಂಎಸ್ ಐಎಲ್ ಇಂತಹದ್ದೊಂದು ಆಫರ್ ಕೊಟ್ಟಿದೆ. ವಿಶೇಷವಾಗಿ ನಿವೃತ್ತಿಯಾದವರು, ಹಿರಿಯ ನಾಗರಿಕರು, ಸರ್ಕಾರೀ ನೌಕರರನ್ನು ಗಮನದಲ್ಲಿಟ್ಟುಕೊಂಡು ಇಂತಹದ್ದೊಂದು ಯೋಜನೆ ಜಾರಿಗೆ ತರಲಾಗಿದೆ.

ಇಂದು ಸಚಿವ ಎಂಬಿ ಪಾಟೀಲ್ ಎಂಎಸ್ಐಎಲ್ ನ ಆಕರ್ಷಕ ಟೂರಿಸ್ಟ್ ಪ್ಯಾಕೇಜ್ ನ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಮೊದಲಿನಿಂದಲೂ ಎಂಎಸ್ಐಎಲ್ ಆಕರ್ಷಕ ಟೂರ್ ಪ್ಯಾಕೇಜ್ ಗಳ ಮೂಲಕ ಜನರ ವಿಶ್ವಾಸಾರ್ಹತೆ ಪಡೆದುಕೊಂಡಿದೆ. ಸೆಪ್ಟೆಂಬರ್ ನಲ್ಲಿ ವಾರಣಾಸಿ ಮತ್ತು ಆದಿಕೈಲಾಸಕ್ಕೆ ಪ್ರವಾಸ ಮಾಡಲಾಗುವುದು ಎಂದಿದ್ದಾರೆ.

ಪ್ಯಾಕೇಜ್ ನಲ್ಲಿ ಏನೆಲ್ಲಾ ಆಫರ್ ಇರುತ್ತದೆ?
ಪ್ಯಾಕೇಜ್ ನಲ್ಲಿ ಆಕರ್ಷಕ ಆಫರ್ ಗಳನ್ನು ನೀಡಲಾಗಿದೆ. ಸುರಕ್ಷತೆ, ಶುಚಿ,ರುಚಿಯಾದ ಆಹಾರ, ಸಹಾಯಕರ ನೆರವು, ಮನೆ ಬಾಗಿಲಿನಿಂದಲೇ ಕರೆದೊಯ್ಯುವ ವ್ಯವಸ್ಥೆ ನೀಡಲಾಗುತ್ತದೆ. ಒಂದು ಬ್ಯಾಚ್ ನಲ್ಲಿ 100 ಮಂದಿಗೆ ಅವಕಾಶ ನೀಡಲಾಗುತ್ತದೆ.  ಒಂದೇ ಸಮಯಕ್ಕೆ ಒಟ್ಟಿಗೇ 20 ಸಾವಿರ ರೂ. ಪಾವತಿಸಲು ಸಾಧ್ಯವಾಗದೇ ಇದ್ದರೆ ಮೊದಲು ಶೇ.50 ರಷ್ಟು ಹಣ ಪಾವತಿಸಿ ಉಳಿದ ಹಣವನ್ನು ಕಂತಿನಲ್ಲಿ ಪಾವತಿಸಬಹುದು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments