Publish Date: Sat, 25 Jan 2020 (11:51 IST)
Updated Date: Sat, 25 Jan 2020 (11:52 IST)
ಕಳೆದೆರಡು ವರ್ಷಗಳಿಂದ ನಾಪತ್ತೆಯಾಗಿರೋ ಅತ್ಯಾಚಾರ ಕೇಸ್ ನ ಆರೋಪಿ ನಿತ್ಯಾನಂದನಿಗೆ ಹೊಸ ಸಂಕಷ್ಟ ಎದುರಾಗಿದೆ.
ಹೈಕೋರ್ಟ್ ನಿಂದ ನಿತ್ಯಾನಂದನ ವಿರುದ್ಧ ಸಮನ್ಸ್ ಜಾರಿಯಾಗಿದ್ದು, ಸಿಐಡಿ ಹಾಗೂ ರಾಜ್ಯ ಸರಕಾರಕ್ಕೂ ನೋಟಿಸ್ ಜಾರಿಮಾಡಲಾಗಿದೆ.
ಪ್ರಕರಣದ ವಿಚಾರಣೆ ವೇಳೆ ನಿತ್ಯಾನಂದನ ಜಾಮೀನು ರದ್ದು ಮಾಡಬೇಕೆಂದು ಲೆನಿನ್ ಅರ್ಜಿ ಸಲ್ಲಿಕೆ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇದುವರೆಗೆ 40 ಕ್ಕೂ ಹೆಚ್ಚು ಸಲ ಕೋರ್ಟ್ ಗೆ ಗೈರಾಗಿರೋ ನಿತ್ಯಾನಂದನ ವಿರುದ್ಧ ಮತ್ತೆ ಸಮನ್ಸ್ ಜಾರಿಮಾಡಿದೆ.