Select Your Language

Notifications

webdunia
webdunia
webdunia
webdunia

ನಿಮ್ಮ ವೈವಾಹಿಕ ಬದುಕು ಕಟ್ಕೊಂಡು ನಮಗೇನು? ಏಕಪತ್ನಿ ವ್ರತಸ್ಥ ಚಾಲೆಂಜ್ ಗೆ ಜನರ ತಿರುಗೇಟು

ನಿಮ್ಮ ವೈವಾಹಿಕ ಬದುಕು ಕಟ್ಕೊಂಡು ನಮಗೇನು? ಏಕಪತ್ನಿ ವ್ರತಸ್ಥ ಚಾಲೆಂಜ್ ಗೆ ಜನರ ತಿರುಗೇಟು
ಬೆಂಗಳೂರು , ಗುರುವಾರ, 25 ಮಾರ್ಚ್ 2021 (10:08 IST)
ಬೆಂಗಳೂರು: ಆರೋಗ್ಯ ಸಚಿವ ಡಾ. ಸುಧಾಕರ್ 225 ಜನ ಶಾಸಕರ ವೈವಾಹಿಕ ಬದುಕಿನ ಬಗ್ಗೆ ತನಿಖೆಯಾಗಲಿ ಎಂದು ನೀಡಿದ ಹೇಳಿಕೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಿಎಂ ಬಿಎಸ್ ವೈ ಮತ್ತು ಸ್ಪೀಕರ್ ಗೆ ಪತ್ರ ಬರೆದು ನಾವು ನಮ್ಮ ವೈವಾಹಿಕ ಬದುಕಿನ ಬಗ್ಗೆ ತನಿಖೆಗೆ ಸಿದ್ಧ ಎಂದಿದ್ದಾರೆ.


ಇದಲ್ಲದೆ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ನಮ್ಮ ಎಲ್ಲಾ ಶಾಸಕರೂ ವೈವಾಹಿಕ ಸಂಬಂಧವನ್ನು ಸಾರ್ವಜನಿಕವಾಗಿ ಸಾಬೀತುಪಡಿಸಲು ಸಿದ್ಧ. ಇದನ್ನು ಪತ್ರ ಮುಖೇನವೂ ಹೇಳಿದ್ದೇವೆ. ಬಿಜೆಪಿ ಶಾಸಕರೂ ತನಿಖೆಗೊಳಪಡಲಿ ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಹೀಗೊಂದು ಸರಣಿ ಟ್ವೀಟ್ ಮಾಡುತ್ತಿದ್ದಂತೇ ನೆಟ್ಟಿಗರು ಕಾಮೆಂಟ್ ಮಾಡಿದ್ದು, ನಿಮ್ಮ ವೈವಾಹಿಕ ಬದುಕನ್ನು ಕಟ್ಟಿಕೊಂಡು ರಾಜ್ಯದ ಜನತೆಗೆ ಏನಾಗಬೇಕಿದೆ? ನಮ್ಮಲ್ಲಿ ಬೆಲೆ ಏರಿಕೆ ಸೇರಿದಂತೆ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಹಲವು ಸಮಸ್ಯೆಗಳಿವೆ. ಅದರ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ, ಪರಿಹಾರ ಕಂಡುಕೊಳ್ಳಿ. ಅದು ಬಿಟ್ಟು, ಸಿಡಿ, ವೈವಾಹಿಕ ಬದುಕು ಎಂದು ಸದನದ ಸಮಯ ಹಾಳುಮಾಡಿಕೊಂಡು ಮರ್ಯಾದೆ ಕಳೆಯುವ ಕೆಲಸ ಯಾಕೆ ಮಾಡುತ್ತಿದ್ದೀರಿ ಎಂದು ಹರಿಹಾಯ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ