Select Your Language

Notifications

webdunia
webdunia
webdunia
webdunia

ನೆರೆ ಸಂತ್ರಸ್ಥರ ಸ್ಥಿತಿ : ಸೂತಕದ ಮನೆಯಲ್ಲಿ ವಿಧಿಯ ನಾಟಕದಂತೆ

ನೆರೆ ಸಂತ್ರಸ್ಥರ ಸ್ಥಿತಿ : ಸೂತಕದ ಮನೆಯಲ್ಲಿ ವಿಧಿಯ ನಾಟಕದಂತೆ
ಚಿಕ್ಕೋಡಿ , ಗುರುವಾರ, 22 ಆಗಸ್ಟ್ 2019 (19:53 IST)
ಕೃಷ್ಣಾ ನದಿಯ ಪ್ರವಾಹ ಪೀಡಿತ ಗ್ರಾಮಗಳಲ್ಲಿ ನಿಲ್ಲದ ಕಣ್ಣೀರ ಕೋಡಿ. ಹುಟ್ಟಿ ಬೆಳೆದು ಬದುಕಿದ ಊರುಗಳಲ್ಲಿ ನೀರವ ಮೌನ. ಅಕ್ಷರಶಃ ಸೂತಕದ ವಾತಾವರಣ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಪ್ರವಾಹ ಹಾನಿ ಕುರಿತು ಪರಿವೀಕ್ಷಣೆ ಮಾಡಿದರು.

ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದಲ್ಲಿ ಇರುವ ಜೀರೊ ಪಾಯಿಂಟ್ ನಲ್ಲಿ ಶಶಿಕಲಾ ಜೊಲ್ಲೆ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿತು. ಈ ಸಂದರ್ಭದಲ್ಲಿ  ಹಲವು  ಕೇಂದ್ರಗಳ ಅವ್ಯವಸ್ಥೆಯ ಕುರಿತು ಮಾಹಿತಿ ತಿಳಿದುಕೊಂಡರು. ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಕಾಳಜಿ ಕೇಂದ್ರದಲ್ಲಿ ಮೃತಪಟ್ಟ ರಹೆಮಾನ ಅತ್ತಾರ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಶಶಿಕಲಾ ಜೊಲ್ಲೆ ನಂತರ ಕಾಳಜಿ ಕೇಂದ್ರದಲ್ಲಿ ತೆರೆಯಲಾದ ಅಂಗನವಾಡಿಯ ಮಗುವನ್ನು ಕೆಲ ಹೊತ್ತು ಮಾತನಾಡಿಸಿ ಅಲ್ಲಿನ ಸ್ಥಿತಿಯ ಆಲಿಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶ್ರುತಿ ಹರಿಹರನ್ ಗೆ ಹೊಸ ಸಂಕಷ್ಟ