Webdunia - Bharat's app for daily news and videos

Install App

ಕ್ವಾಟ್ಲೆ ಸತೀಶ್ ಈಗ ಫುಲ್ ಖುಷ್ ಯಾಕೆ ಗೊತ್ತಾ?

Webdunia
ಬುಧವಾರ, 3 ಅಕ್ಟೋಬರ್ 2018 (15:13 IST)
ಕ್ವಾಟ್ಲೆ ಸತೀಶನ ಜೀವನದಲ್ಲಿ ಶ್ರೇಷ್ಠವಾದ ಘಟನೆ ನಡೆದಿದೆ. ಈ ಕಾಕತಾಳೀಯ ಘಟನೆಯಿಂದ ಹೆಮ್ಮೆ ಪಡುವಂತಾದ ಸತೀಶ್ ನಿನಾಸಂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್ ಕಟೌಟ್ ಪಕ್ಕದಲ್ಲೇ ತನ್ನ ಕಟೌಟ್ ನಿಂತಿರುವುದಕ್ಕೆ ಹೆಮ್ಮೆ ಪಡುತ್ತಿರುವ ಸತೀಶ್, ಇದೊಂದು ರೀತಿ‌ಯ  ಕಾಕತಾಳೀಯ. ಅಂಬಿ ಅಣ್ಣನ, ಅಂಬಿ ನಿನಗೆ ವಯಸ್ಸಾಯ್ತೋ ಚಿತ್ರ ಮಂಡ್ಯದ ಸಿದ್ದಾರ್ಥ ಚಿತ್ರಮಂದಿರದಲ್ಲಿ ಬಿಡುಗೆಡಯಾಗಿದ್ದರೆ, ಪಕ್ಕದ ಸಂಜಯ ಚಿತ್ರಮಂದಿರದಲ್ಲಿ ನನ್ನ ಅಯೋಗ್ಯ ಚಿತ್ರ ಪ್ರದರ್ಶನ ಕಾಣುತ್ತಿದೆ. ನನ್ನದು 50ನೇ ದಿನ.

ಇದಲ್ಲವೇ ಹೆಮ್ಮೆಯ ವಿಷಯ, ಒಂದು ಕಾಲದಲ್ಲಿ ಅಂಬರೀಶ್ ಅವರ ಚಿತ್ರಕ್ಕಾಗಿ ಟಿಕೆಟ್ ಗೆ ಕ್ಯೂನಲ್ಲಿ ಅದೇ ಚಿತ್ರಮಂದಿರದಲ್ಲಿ ನಿಂತಿದ್ದೆ. ಇಂದು ಅವರ ಕಟೌಟ್ ಪಕ್ಕದಲ್ಲೇ ನನ್ನದು ಒಂದು ಕಟೌಟ್ ನಿಂತಿದೆ. ಇದೊಂದು ನನ್ನ ವೃತ್ತಿ ಬದುಕಿನಲ್ಲೇ ಶ್ರೇಷ್ಠವಾದದ್ದು. ಅವರ ಜೊತೆ ಅಭಿನಯಿಸೋ ಹಂಬಲ ಇನ್ನು ಇದೆ. ಅವರ ಆಶೀರ್ವಾದ ‌ನಮ್ಮ ಜೊತೆಗಿದೆ. ಈ ವಾರ ನೋಡುವೆ‌ ಅಂಬಿ ನಿನಗೆ ವಯಸ್ಸಾಯ್ತೋ. ನೀವೆಲ್ಲರೂ ನೋಡಿ ಅಂತ ತಮ್ಮ‌ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments