Select Your Language

Notifications

webdunia
webdunia
webdunia
webdunia

ಇಂದು ಶಿರಾದಲ್ಲಿ ನಡ್ಡಾ ಮತ ಬೇಟೆ

ಇಂದು ಶಿರಾದಲ್ಲಿ ನಡ್ಡಾ ಮತ ಬೇಟೆ
ತುಮಕೂರು , ಶುಕ್ರವಾರ, 6 ಜನವರಿ 2023 (08:30 IST)
ತುಮಕೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ (ಇಂದು) ತುಮಕೂರು ಜಿಲ್ಲೆಯಲ್ಲಿ ಎರಡನೇ ಸುತ್ತಿನ ಮತ ಬೇಟೆ ನಡೆಸಲಿದ್ದಾರೆ.

ಉಪಾ ಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ ಶಿರಾ ಕ್ಷೇತ್ರ ದಲ್ಲಿ ಜನ ಸಂಕಲ್ಪಯಾತ್ರೆ ನಡೆಸಿ ಇನ್ನಷ್ಟು ಭದ್ರಗೊಳಿಸಲು ಸಜ್ಜಾಗಿದೆ. ಪಾವಗಡ, ಕೊರಟಗೆರೆ, ಮಧುಗಿರಿ ಭಾಗದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಹಾಗಾಗಿ ಈ ಭಾಗದಲ್ಲಿ ಪಕ್ಷ ಬಲಗೊಳಿಸಲು ಸಜ್ಜಾದ ಬಿಜೆಪಿ ಶಿರಾದಲ್ಲಿ ಬೃಹತ್ ಸಂಕಲ್ಪ ಯಾತ್ರೆ ನಡೆಸುತ್ತಿದೆ. 

ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ಕಟೀಲ್, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ನಾಯಕರು ದಂಡೇ ಉಪಸ್ಥಿತಿ ಇರಲಿದೆ. ಜನ ಸಂಕಲ್ಪಯಾತ್ರೆ ಹಿನ್ನೆಲೆಯಲ್ಲಿ ಶಿರಾ ನಗರ ಸಂಪೂರ್ಣ ಕೇಸರಿಮಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ.1ಕ್ಕೆ ರಾಮ ಮಂದಿರ ಲೋಕಾರ್ಪಣೆ: ಅಮಿತ್ ಶಾ