Publish Date: Tue, 18 Apr 2023 (20:20 IST)
Updated Date: Tue, 18 Apr 2023 (19:43 IST)
ಬೆಳಗಾವಿಯ ಅಥಣಿಯಲ್ಲಿಂದು ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಅಥಣಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಸಾವಿರಾರು ಕಾರ್ಯಕರ್ತರು ಬೆಂಬಲಿಗರು ನನಗೆ ಬೆಂಬಲ ನೀಡಿದ್ದಾರೆ. ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲಿದ್ದೇನೆ. ಅಥಣಿಯಲ್ಲಿ 11 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷೆಗಳಿದ್ರೂ ಎಲ್ಲರೂ ಯಾವುದೆ ಭಿನ್ನಮತ ಇಲ್ಲದೆ ನನಗೆ ಬೆಂಬಲವಾಗಿ ನಿಂತಿದ್ದಾರೆ. ಅಥಣಿ ಬಿಜೆಪಿ ಕೋಟೆ ಛಿದ್ರ ಆಗುತ್ತೊ ಇಲ್ಲೊ ಗೊತ್ತಿಲ್ಲ. ನನ್ನ ಗೆಲುವು ಮಾತ್ರ ನಿಶ್ಚಿತ ಅಂತಾ ಲಕ್ಷ್ಮಣ ಸವದಿ ತಿಳಿಸಿದ್ದಾರೆ.