Publish Date: Mon, 29 Jun 2020 (17:44 IST)
Updated Date: Mon, 29 Jun 2020 (17:45 IST)
ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದ್ದು, ಯುವತಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ.
ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಸಂಧ್ಯಾ ಎನ್ನುವ ಯುವತಿ ಸ್ವಂತ ತನ್ನ ತಾಯಿ, ಅಣ್ಣ, ಅಕ್ಕ, ಭಾವನ ಕೈಯಿಂದ ಕೊಲೆಯಾಗಿದ್ದಾಳೆ.
ಬೇರೆ ಜಾತಿಯ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಸಂಧ್ಯಾ ಆತನೊಂದಿಗೆ ಕೆಲವು ದಿನಗಳವರೆಗೆ ಓಡಿ ಹೋಗಿದ್ದಳು. ಈ ಕೇಸ್ ನಿಂದಾಗಿ ಯುವಕ ಜೈಲು ಸೇರಿದ್ದಾನೆ.
ಈ ನಡುವೆ ಸಂಧ್ಯಾಳ ಮದುವೆಗೆ ಮನೆ ಮಂದಿ ಸಿದ್ಧತೆ ನಡೆಸಿದ್ದು, ಇದಕ್ಕೆ ಸಂಧ್ಯಾ ಒಪ್ಪಿಲ್ಲ. ಹೀಗಾಗಿ ಸಂಧ್ಯಾಳನ್ನು ತಾಯಿ ರಾಮಾಂಜಿನಮ್ಮಾ, ಅಣ್ಣ ಅಶೋಕ, ಸಹೋದರಿ ನೇತ್ರಾ, ಭಾವ ಬಾಲಕೃಷ್ಣ ಕೊಲೆ ಮಾಡಿದ್ದಾರೆ.
ಶವವನ್ನು ಗೌರಿಬಿದನೂರಿನ ಹುಲಿಕುಂಟೆ ಹತ್ತಿರ ಕೆರೆಯೊಂದರಲ್ಲಿ ಕಲ್ಲು ಕಟ್ಟಿ ಹಾಕಿದ್ದರು. ಪೊಲೀಸರು ಕೇಸ್ ಪತ್ತೆ ಹಚ್ಚಿದ್ದಾರೆ.
ಗೌರಿಬಿದನೂರು ವ್ಯಾಪ್ತಿಯ ತುಮಕುಂಟೆ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.