Select Your Language

Notifications

webdunia
webdunia
webdunia
webdunia

ಶ್ರೀರಾಮ ದೇವಾಲಯದಲ್ಲಿ ಯುವಕನ ಕೊಲೆ?

ಶ್ರೀರಾಮ ದೇವಾಲಯದಲ್ಲಿ ಯುವಕನ ಕೊಲೆ?
ಕೋಲಾರ , ಸೋಮವಾರ, 5 ಆಗಸ್ಟ್ 2019 (18:24 IST)
ದೇವಸ್ಥಾನದ ಆವರಣದಲ್ಲೇ ಯುವಕನೊಬ್ಬನ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ.

ಕೋಲಾರದಲ್ಲಿ ಅನುಮಾನಸ್ಪದವಾಗಿ ಯುವಕನ ಸಾವಾಗಿದೆ.

ಕೋಲಾರದ ಕೆಜಿಎಫ್ ಪಟ್ಟಣದ ರಾಮನ ದೇವಾಲಯದ ಆವರಣದಲ್ಲಿ ಘಟನೆ ನಡೆದಿದೆ.

ಪ್ರದೀಪ್ ರಾಜ್ (30) ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನಾಗಿದ್ದಾನೆ. ಮೃತ ಪ್ರದೀಪ್ ರಾಜ್ ಕೆಜಿಎಫ್ ಪಟ್ಟಣದ ಹೌಸಿಂಗ್ ಕಾಲೋನಿ ನಿವಾಸಿಯಾಗಿದ್ದಾನೆ.

ಜಾತ್ರೆಗೆ ಹೋಗಿ ಮನೆಗೆ ವಾಪಸ್ಸು ಬರುವಾಗ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಮಾಡಿ ಕೆಜಿಎಫ್ ನಗರದಲ್ಲಿ ಶವವನ್ನ ಹಾಕಿರುವ ಶಂಕೆ ಕಂಡುಬಂದಿದೆ.

ಮೃತ ಪ್ರದೀಪ್ ರಾಜ್ ಗಾರೆ ಕೆಲಸ ಮಾಡುತ್ತಿದ್ದನು. ಈ ಕುರಿತು ಅಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಹಾಮಳೆಗೆ ಗಡಿಜಿಲ್ಲೆ ತತ್ತರ; 150ಕ್ಕೂ ಹೆಚ್ಚು ಮನೆ ನೆಲಸಮ