Publish Date: Sat, 03 Aug 2019 (11:46 IST)
Updated Date: Sat, 03 Aug 2019 (11:49 IST)
ಚೆನ್ನೈ : ಸಹೋದರಿ ಹಾಗೂ ಚಿಕ್ಕಮ್ಮನ ಜೊತೆ ತನ್ನ ಕಾಮದಾಟ ನೋಡಿದ ತಮ್ಮನನ್ನೆ ಅಣ್ಣ ಕೊಲೆ ಮಾಡಿದ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ.
ಶಿವಕುಮಾರ್ (15) ಕೊಲೆಯಾದ ಬಾಲಕ. ಶರತ್ ಕುಮಾರ್ (21) ಕೊಲೆ ಮಾಡಿದ ಅಣ್ಣ. ಶರತ್ ಕುಮಾರ್ ತನ್ನ 18 ವರ್ಷದ ಸಹೋದರಿ ಸೌಂದರ್ಯ ಹಾಗೂ ಚಿಕ್ಕಮ್ಮ ಜೊತೆ ಅನೈತಿಕ ಸಂಬಂಧ ಬೆಳೆಸುತ್ತಿರುವಾಗ ಅಚಾನಕ್ ಆಗಿ ಅಲ್ಲಿಗೆ ಬಂದ ತಮ್ಮ ಎಲ್ಲವನ್ನೂ ನೋಡಿ ಬೇರೆಯವರಿಗೆ ಹೇಳುತ್ತಾನೆ ಎಂದು ಆತನನ್ನು ಮೊಲದ ಬೇಟೆಗೆಂದು ಹತ್ತಿರದ ಅರಣ್ಯ ಪ್ರದೇಶದ ಕರೆದುಕೊಂಡು ಹೋಗಿ ತಮ್ಮನ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶಿವಕುಮಾರ್ ಮೃತದೇಹ ಪತ್ತೆಯಾಗಿದ್ದ ಹಿನ್ನಲೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ ಪೊಲೀಸರು ಅನುಮಾನದ ಮೇರೆಗೆ ಸಹೋದರ ಶರತ್ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾನೇ ಸಹೋದರನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶರತ್ಕುಮಾರ್, ಸೌಂದರ್ಯ ಹಾಗೂ ಚಿಕ್ಕಮ್ಮ ಮೂವರನ್ನು ಬಂಧಿಸಿದ್ದಾರೆ.