Select Your Language

Notifications

webdunia
webdunia
webdunia
webdunia

ಅಡುಗೆ ಸರಿ ಮಾಡಿಲ್ಲ ಅಂತ ಪತ್ನಿಯನ್ನೇ ಕೊಂದ ಭೂಪ

ಅಡುಗೆ ಸರಿ ಮಾಡಿಲ್ಲ ಅಂತ ಪತ್ನಿಯನ್ನೇ ಕೊಂದ ಭೂಪ
ಆನೇಕಲ್ , ಗುರುವಾರ, 1 ಆಗಸ್ಟ್ 2019 (17:26 IST)
ಅಡುಗೆ ವಿಷಯಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.

ಗಂಡನಿಂದಲೇ ಪತ್ನಿಯ ಭೀಕರ  ಕೊಲೆ ನಡೆದಿದೆ. ಅಡುಗೆ  ವಿಚಾರಕ್ಕೆ ಗಲಾಟೆ‌ ನಡೆದು ಕೊನೆಗೆ ಅದು ಕೊಲೆಯಲ್ಲಿ ಅಂತ್ಯಗೊಂಡಿದೆ.

ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪಾಳ್ಯದಲ್ಲಿ ಘಟನೆ ನಡೆದಿದೆ.

ಮೀನಾ ಕಥನ್ ಕೊಲೆಯಾದ ದುರ್ದೈವಿಯಾಗಿದ್ದು, ಕೊಲೆ ಅರೋಪಿ  ಶೇಕ್ ನನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಕಾರಿಪಾಳ್ಯದ ಮಲ್ಲಣ್ಣ ಎಂಬುವರ ಬಾಡಿಗೆ ಮನೆಯಲ್ಲಿ ಮೂರು ವರ್ಷಗಳಿಂದ ವಾಸವಾಗಿದ್ದ ದಂಪತಿ. ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.

ಸ್ಥಳಕ್ಕೆ ಡಿವೈ ಎಸ್ಪಿ ನಂಜುಂಡೇಗೌಡ ಹಾಗೂ  ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಲೋಕಲ್ ಟ್ರೈನ್ ನಲ್ಲಿ ಆ ಕೆಲಸ ಮಾಡಿದ್ದ ಯುವಕರು ಸಿಕ್ಕಿಬಿದ್ರು