Select Your Language

Notifications

webdunia
webdunia
webdunia
webdunia

ಕೊರೋನಾದಿಂದ ಅನಾಥಳಾದ ಬಾಲಕಿಗೆ ಆಸರೆಯಾದ ಶಾಸಕ ರೇಣುಕಾಚಾರ್ಯ

ಕೊರೋನಾದಿಂದ ಅನಾಥಳಾದ ಬಾಲಕಿಗೆ ಆಸರೆಯಾದ ಶಾಸಕ ರೇಣುಕಾಚಾರ್ಯ
ಬೆಂಗಳೂರು , ಶುಕ್ರವಾರ, 2 ಜುಲೈ 2021 (09:10 IST)
ಬೆಂಗಳೂರು: ಕೊರೋನಾ ಮಹಾಮಾರಿ ವಕ್ಕರಿಸಿರುವಾಗ ತಮ್ಮ ಕ್ಷೇತ್ರ ಹೊನ್ನಾಳಿಯಲ್ಲಿ ಕೊರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಶಾಸಕ ಎಂಪಿ ರೇಣುಕಾಚಾರ್ಯ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.


ಕೊರೋನಾದಿಂದಾಗಿ ತನ್ನ ಪೋಷಕರನ್ನು ಕಳೆದುಕೊಂಡು ಅನಾಥಳಾದ ಬಾಲಕಿಯನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ತಮ್ಮ ಪತ್ನಿ ಜೊತೆ ಬಾಲಕಿಯ ಮನೆಗೆ ಭೇಟಿ ನೀಡಿದ ರೇಣುಕಾಚಾರ್ಯ ಸಂಬಂಧಿಕರು ಒಪ್ಪಿದರೆ ಆಕೆಯನ್ನು ದತ್ತು ಪಡೆಯುವುದಾಗಿ ಹೇಳಿದ್ದಾರೆ.

ಬಾಲಕಿಯನ್ನು ಸಾಂತ್ವನಿಸಿದ ಶಾಸಕರು, ಆಕೆಗೆ ಆರ್ಥಿಕ ಸಹಾಯ ಮಾಡಿದ್ದಲ್ಲದೆ, ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಕೊವಿಡ್ ಕೇಂದ್ರಗಳಲ್ಲಿ ಆಹಾರ ತಯಾರಿಸಿಕೊಟ್ಟು, ಅವರ ಜೊತೆ ಯೋಗ ಮಾಡಿ, ಭರವಸೆ ತುಂಬಿದ್ದಲ್ಲದೆ, ಇದೀಗ ಇಂತಹದ್ದೊಂದು ಕೆಲಸಕ್ಕೆ ಮುಂದಾಗಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೆಲ್ಟಾ ಭೀತಿ: ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಯ