Select Your Language

Notifications

webdunia
webdunia
webdunia
webdunia

ಬಿಜೆಪಿಯ ಮೂವರಿಂದ ದ್ರೋಹ: ರಮೇಶ್ ಜಾರಕಿಹೊಳಿ ಬಾಂಬ್

ಬಿಜೆಪಿಯ ಮೂವರಿಂದ ದ್ರೋಹ: ರಮೇಶ್ ಜಾರಕಿಹೊಳಿ ಬಾಂಬ್
bangalore , ಬುಧವಾರ, 30 ಜೂನ್ 2021 (15:28 IST)
ಬಿಜೆಪಿಯ ಮೂವರು ಶಾಸಕರಿಂದಲೇ ನನಗೆ ದ್ರೋಹ ಆಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಳಗೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎಂಬಂತೆ ನನ್ನನ್ನು ತುಳಿಯಲು ನೋಡುತ್ತಿದ್ದಾರೆ. ನಮ್ಮ ಜೊತೆಗೆ ಇದ್ದು ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಬಿಜೆಪಿಯ ಮೂವರು ಶಾಸಕರು ಮಾಡಿದ್ದಾರೆ ಎಂದರು.
 
ನನ್ನ ಜೊತೆಯಲ್ಲೇ ಇದ್ದು ದ್ವೇಷ ಸಾಧಿಸುತ್ತಿದ್ದಾರೆ. ನನಗೆ ದ್ರೋಹ ಮಾಡಿದವರು ಯಾರು ಎಂಬುದು ಬಹಿರಂಗಪಡಿಸುತ್ತೇನೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರ ಷಡ್ಯಂತ್ರ ಬಯಲು ಮಾಡುತ್ತೇನೆ. ಶೀಘ್ರದಲ್ಲೇ ಅವರ ಆಡಿಯೋ- ವೀಡಿಯೊವನ್ನು ಬಿಡುಗಡೆ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸವಾಲು ಹಾಕಿದರು.
 
ನನಗೆ ರಾತ್ರಿ 2 ಗಂಟೆಗೆ ಕರೆ ಬಂದಿದೆ. ಅವರ ಆಹ್ವಾನದ ಮೇರೆಗೆ ದೆಹಲಿಗೆ ಬಂದಿದ್ದೇನೆ. ನನ್ನ ದೆಹಲಿ ಭೇಟಿ ಅವರಿಗೆ ಶಾಕ್ ನೀಡಿದೆ. ಎಲ್ಲರಿಗೂ ಶಾಕ್ ಆಗಲಿದೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರ ಖಾತೆ ಲಾಕ್ ಮಾಡಿದ ಟ್ವಿಟರ್ ಗೆ ನೋಟಿಸ್