Select Your Language

Notifications

webdunia
webdunia
webdunia
Sunday, 13 April 2025
webdunia

ಸಚಿವ ಸಿಪಿ ಯೋಗೇಶ್ವರ್ ಜೊತೆ ಅಂಜನಾದ್ರಿ ದೇವಾಲಯಕ್ಕೆ ಭೇಟಿ ನೀಡಿದ ನಟಿ ಶ್ರುತಿ

ಶ್ರುತಿ
ಬೆಂಗಳೂರು , ಗುರುವಾರ, 1 ಜುಲೈ 2021 (09:19 IST)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಬಂಡಾಯವೆದ್ದಿರುವ ಸಚಿವ ಸಿಪಿ ಯೋಗೇಶ್ವರ್ ಹೈಕಮಾಂಡ್ ಭೇಟಿ ಬಳಿಕ ಟೆಂಪಲ್ ರನ್ ನಡೆಸಿದ್ದಾರೆ.


ನಾಯಕತ್ವ ಬದಲಾವಣೆ ವಿಚಾರದಲ್ಲಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂದಿರುವ ಯೋಗೇಶ್ವರ್ ಇದಕ್ಕೂ ಮೊದಲು ದೇವರ ಮೊರೆ ಹೋಗಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಹನುಮಪ್ಪನ ದರ್ಶನ ಪಡೆದು ಪೂಜೆ ಮಾಡಿಸಿದ್ದಾರೆ.

ಈ ಸಂದರ್ಭದಲ್ಲಿ ನಟಿ, ಬಿಜೆಪಿ ನಾಯಕಿ ಶ್ರುತಿ ಕೂಡಾ ಸಾಥ್ ನೀಡಿದ್ದಾರೆ. ವಿಶೇಷವೆಂದರೆ ಇದಕ್ಕೂ ಮೊದಲು ಯೋಗೇಶ್ವರ್ ಇನ್ನೊಬ್ಬ ಬಂಡಾಯ ನಾಯಕ ಬಸನಗೌಡ ಯತ್ನಾಳ್ ಭೇಟಿ ಸಂದರ್ಭದಲ್ಲಿಯೂ ಜೊತೆಯಾಗಿದ್ದರು. ಹೀಗಾಗಿ ಶ್ರುತಿ ಕೂಡಾ ನಾಯಕತ್ವ ಬದಲಾವಣೆಯಾಗಬೇಕು ಎನ್ನುವ ನಾಯಕರ ಗುಂಪಿಗೆ ಸಾಥ್ ನೀಡಿದ್ದಾರೆಯೇ ಎಂಬ ಅನುಮಾನ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರ ಕೈಗೆ ಸ್ಪೋಟಕ ತುಂಬಿದ ಡ್ರೋನ್ ಸಿಕ್ಕಿದ್ದು ಹೇಗೆ?