Select Your Language

Notifications

webdunia
webdunia
webdunia
webdunia

ಸಿಪಿ ಯೋಗೇಶ್ವರ್ ದೆಹಲಿ ಪ್ರವಾಸ: ಮತ್ತೆ ಶುರುವಾಗುತ್ತಾ ಸಿಎಂ ಕುರ್ಚಿ ಫೈಟ್?

ಸಿಪಿ ಯೋಗೇಶ್ವರ್ ದೆಹಲಿ ಪ್ರವಾಸ: ಮತ್ತೆ ಶುರುವಾಗುತ್ತಾ ಸಿಎಂ ಕುರ್ಚಿ ಫೈಟ್?
ಬೆಂಗಳೂರು , ಶನಿವಾರ, 26 ಜೂನ್ 2021 (10:01 IST)
ಬೆಂಗಳೂರು: ಸದ್ಯಕ್ಕೆ ತಣ್ಣಗಾಗಿರುವ ಸಿಎಂ ಬದಲಾವಣೆ ವಿಚಾರ ಮತ್ತೆ ಭುಗಿಲೇಳುವ ಲಕ್ಷಣಗಳು ಕಾಣುತ್ತಿವೆ. ಸಚಿವರಾದ ಸಿಪಿ ಯೋಗೇಶ್ವರ್, ಸಿಟಿ ರವಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲ ಮೂಡಿಸಿದೆ.


ಈ ಮೊದಲು ಯಡಿಯೂರಪ್ಪ ಆಡಳಿತ ವೈಖರಿ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮುಂದೆ ಯೋಗೇಶ್ವರ್‍ ಆರೋಪಗಳ ಸುರಿಮಳೆಯೇಗೈದಿದ್ದರು. ಇದೀಗ ಸಿಟಿ ರವಿ ಜೊತೆಗೆ ಕೇಂದ್ರ ನಾಯಕರನ್ನು ಭೇಟಿಯಾಗಲು ಅವರು ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಎಲ್ಲಾ ಶಾಸಕರು, ಸಚಿವರೊಂದಿಗೆ ಸಭೆ ನಡೆಸಿದ್ದ ಅರುಣ್ ಸಿಂಗ್ ಇಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ವರಿಷ್ಠರಿಗೆ ವರದಿ ನೀಡಿದ್ದರು. ಇದರ ಪರಿಣಾಮ ಇನ್ನಷ್ಟೇ ಹೊರಬರಬೇಕಿದೆ. ಅದರ ನಡುವೆಯೇ ಇಬ್ಬರೂ ಸಚಿವರ ದೆಹಲಿ ಭೇಟಿ ಮತ್ತೊಮ್ಮೆ ಸಿಎಂ ಬದಲಾವಣೆ ಫೈಟ್ ಗೆ ಕಾರಣವಾಗುತ್ತಾ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರ ಶಾಲೆ ತೆರೆಯುವ ಬಗ್ಗೆ ನಿರ್ಧಾರ