Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲೂ ಶುರುವಾಯ್ತು ಡೆಲ್ಲಿ ಪಾಲಿಟಿಕ್ಸ್

ಬಿಜೆಪಿಯಲ್ಲೂ ಶುರುವಾಯ್ತು ಡೆಲ್ಲಿ ಪಾಲಿಟಿಕ್ಸ್
ಬೆಂಗಳೂರು , ಬುಧವಾರ, 30 ಜೂನ್ 2021 (09:00 IST)
ಬೆಂಗಳೂರು: ಸಿಎಂ ಬದಲಾವಣೆ ವಿಚಾರಣೆ ಮತ್ತೆ ಬಿಜೆಪಿಯಲ್ಲಿ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಸಿಪಿ ಯೋಗೇಶ್ವರ್, ರಮೇಶ್ ಜಾರಕಿಹೊಳಿ, ಬಸನಗೌಡ ಯತ್ನಾಳ್ ನಡುವಿನ ರಹಸ್ಯ ಭೇಟಿ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.


ಮುಂಬೈಗೆ ತೆರಳಬೇಕಿದ್ದ ರಮೇಶ್ ಜಾರಕಿಹೊಳಿ ದಿಡೀರ್ ಪ್ಲ್ಯಾನ್ ಬದಲಾಯಿಸಿ ದೆಹಲಿಗೆ ತೆರಳಿದ್ದಾರೆ. ಇನ್ನು ಸಿಪಿ ಯೋಗೇಶ್ವರ್ ಕೂಡಾ ದೆಹಲಿಗೆ ಹೋಗಿದ್ದರು. ಇದೀಗ ವಿಜಯಪುರದಲ್ಲಿ ಯತ್ನಾಳ್ ಜೊತೆ ರಹಸ್ಯ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಇವರಿಗೆ ಚಿತ್ರ ನಟಿ, ಬಿಜೆಪಿಯ ಶ್ರುತಿ ಕೂಡಾ ಸಾಥ್ ನೀಡಿದ್ದು ವಿಶೇಷವಾಗಿತ್ತು. ಹೀಗಾಗಿ ಸಿಎಂ ಬದಲಾವಣೆ ಸರ್ಕಸ್ ಮತ್ತೆ ತೆರೆಮರೆಯಲ್ಲಿ ಮುಂದುವರಿದಿರುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಲ್ಲೀಗ ಎಲ್ಲರೂ ಸಿಎಂ ಆಕಾಂಕ್ಷಿಗಳೇ