Webdunia - Bharat's app for daily news and videos

Install App

ರಾಮಲಿಂಗಾರೆಡ್ಡಿ ಪರ ಬ್ಯಾಟ್ ಸಂಸದ ಡಿ.ಕೆ.ಸುರೇಶ್ ಬ್ಯಾಟ್

Webdunia
ಭಾನುವಾರ, 1 ಜುಲೈ 2018 (19:33 IST)
ಸಮ್ಮೀಶ್ರ ಸರ್ಕಾರದ ಸಚಿವ ಸ್ಥಾನದ ಅಕಾಂಕ್ಷಿಗಳ ರಗಳೆ ಇನ್ನೂ ಮುಗಿದಿಲ್ಲ. ಇದೀಗ ಶಾಸಕರೇ ಅಲ್ಲದೇ ಸಂಸದರು ಕೂಡ ಅಖಾಡಕ್ಕೆ ದುಮುಕಿದ್ದಾರೆ. ಸಂಸದ ಡಿ.ಕೆ.ಸುರೇಶ್ ರವರು ಮಾಜಿ ಸಚಿವ ಹಾಗೂ ರೆಡ್ಡಿ ಸಮೂದಾಯದ ಪ್ರಭಾವಿ ಮುಖಂಡ ರಾಮಲಿಂಗಾರೆಡ್ಡಿ ಪರ ಬ್ಯಾಟ್ ಬೀಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಅಯ್ಕೆಯಾದ ಶಿವಣ್ಣನವರು ಏರ್ಪಡಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ,  ರಾಮಲಿಂಗಾರೆಡ್ಡಿರವರು ಸೌಮ್ಯ ಸ್ವಭಾವದವರು. ಅವರಿಂದಲೇ ಬೆಂಗಳೂರಿನಲ್ಲಿ 15 ಶಾಸಕರು ಗೆಲ್ಲಲು ಸಾದ್ಯವಾಯಿತ್ತೇಂದು ತಿಳಿಸುತ್ತಾ,  ರಾಮಲಿಂಗಾರೆಡ್ಡಿರವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆಂದರು.

ಸಚಿವ ಸ್ಥಾನ ಕೇಳಲು ಮೃದು ಧೋರಣೆ ಸಾಲದೆಂದು ತಿಳಿಸಿದರು. ಹಾಗೆಯೆ ಇದೇ ಸಂದರ್ಭದಲ್ಲಿ ಮಾತನಾಡಿದ  ರಾಮಲಿಂಗಾರೆಡ್ಡಿರವರು, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸುತ್ತಾ ಇನ್ನೂ ನಾವು ಸಚಿವ ಸ್ಥಾನದ ರೇಸ್ ನಲ್ಲಿದ್ದೇವೆ. ಯಾರ ಮನೆಯ ಬಳಿಯು ಹೋಗಿ ಸಚಿವ ಸ್ಥಾನ ನೀಡುವಂತೆ ಕೇಳುವುದಿಲ್ಲ  ಎಂಬ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಿದರು.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments