Publish Date: Thu, 30 Mar 2023 (17:17 IST)
Updated Date: Thu, 30 Mar 2023 (17:14 IST)
ಚುನಾವಣೆ ಸಮಯದಲ್ಲಿ ರೌಡಿಗಳ ಮೇಲೆ ನಿಗಾ ವಹಿಸೋದು, ರೌಡಿಗಳ ಮೇಲೆ 110 ಹಾಕಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗದಂತೆ ಬಾಂಡ್ ಓವರ್ ನ ಪೊಲೀಸ್ರು ಮಾಡುತ್ತಲೇ ಬರ್ತಿದ್ದಾರೆ.
ಸದ್ಯ ಇತ್ತಿಚೇಗೆ ಸಾಕಷ್ಟು ಸದ್ದು ಮಾಡಿದ್ದ ಬೆಂಗಳೂರಿನ ನಟೋರಿಯಸ್ ರೌಡಿ ಶೀಟರ್ ನಾಗರಾಜ @ ವಿಲ್ಸನ್ ಗಾರ್ಡನ್ ನಾಗನನ್ನ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಗಡಿಪಾರು ಮಾಡಿದ್ದಾರೆ. ಇಂದು ನಾಗನನ್ನ ಪಶ್ಚಿಮ ವಿಭಾಗ ಪೊಲೀಸ್ರು ಗಡಿಗೆ ಕರೆದೋಯ್ದು ಕಾನೂನು ಪ್ರಕ್ರಿಯೆ ಮುಗಿಸಿ ಗಡಿಪಾರು ಮಾಡಿದಗದಾರೆ. ಇನ್ನೂ ಒಂದು ನಗರಕ್ಕೆ ನಾಗನ ಎಂಟ್ರಿ ಗೆ ಬಂದ್ ಆಗಲಿದ್ದು ಚುನಾವಣೆ ನಂತರವೂ ನಾಗ ಸಿಟಿಗೆ ಎಂಟ್ರಿ ಕೊಡುವಂತಿಲ್ಲ. ಹಾಗೇನಾದ್ರೂ ಸಿಟಿಗೆ ಎಂಟ್ರಿ ಕೊಡಬೇಕಾದರೆ ನಾಗ ಸೂಕ್ತ ಕಾರಣ ನೀಡಿ ಪೊಲೀಸ್ರಿಗೆ ಮಾಹಿತಿ ನೀಡಿ ಸಿಟಿಗೆ ಎಂಟ್ರಿ ಕೊಡಬೇಕು.