Select Your Language

Notifications

webdunia
webdunia
webdunia
webdunia

ಬೋಸರಾಜು ಸಭೆಗೆ ‘ಕೈ’ ಕೊಟ್ಟ ಶಾಸಕರು

ಬೋಸರಾಜು ಸಭೆಗೆ ‘ಕೈ’ ಕೊಟ್ಟ ಶಾಸಕರು
bangalore , ಸೋಮವಾರ, 5 ಜೂನ್ 2023 (21:08 IST)
ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಗೆ ಕಾಂಗ್ರೆಸ್ ಶಾಸಕರೆಲ್ಲ ಗೈರಾಗಿದ್ದಾರೆ. ಜಿಲ್ಲಾ ಮಂತ್ರಿ N.S ಭೋಸರಾಜ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಿಲ್ಲಾ ಮಂತ್ರಿಗಳ ಪ್ರಥಮ ಸಭೆಗೆ ಜಿಲ್ಲೆಯ 7 ಶಾಸಕರು ಹಾಜರಾಗಿಲ್ಲ.. ಕಾಂಗ್ರೆಸ್ ಪಕ್ಷದ ನಾಲ್ವರು ಶಾಸಕರು ಸೇರಿ ಬಿಜೆಪಿ, ಜೆಡಿಎಸ್ ಶಾಸಕರು ಸಹ ಗೈರಾಗಿದ್ದಾರೆ. ಬೋಸರಾಜು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರಲ್ಲ. ಆದರೂ ಅವರನ್ನು ಮಂತ್ರಿ ಮಾಡಿದ್ದು, ಕಾಂಗ್ರೆಸ್​ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಶಾಸಕರು ಸಚಿವ ಭೋಸರಾಜು ಮೊದಲ ಸಭೆಗೆ ಗೈರು ಹಾಜರಾಗಿ ಶಾಕ್​ ಕೊಟ್ಟಿದ್ದಾರೆ.. ಕಾಂಗ್ರೆಸ್ ಶಾಸಕರ ಗೈರು ಹಿನ್ನೆಲೆ ಸಚಿವ ಭೋಸರಾಜುಗೆ ಭಾರಿ ಮುಜುಗರವಾಗಿದೆ. ಸಿಂಧನೂರು, ಮಾನವಿ, ಮಸ್ಕಿ ಹಾಗೂ ರಾಯಚೂರು ಗ್ರಾಮೀಣ ಕಾಂಗ್ರೆಸ್​ ಶಾಸಕರು ಸಭೆಗೆ ಗೈರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರಣ್ಯ ಇಲಾಖೆ ಅಧಿಕಾರಿ ಮೇಲೆ ಡಿಕೆಶಿ ಗರಂ