Publish Date: Mon, 17 May 2021 (08:54 IST)
Updated Date: Mon, 17 May 2021 (08:56 IST)
ಹೊನ್ನಾಳಿ: ಶಾಸಕ ರೇಣುಕಾಚಾರ್ಯ ಮತ್ತೆ ಕೊರೋನಾ ಪೀಡಿತರಿಗೆ ನೆರವಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ತಮ್ಮ ಮನೆಯ ಮುಂದೆಯೇ ಪತ್ನಿ ಜೊತೆ ಸೇರಿಕೊಂಡು ಇಡ್ಲಿ ತಯಾರಿಸಿ ಸೋಂಕಿತರಿಗೆ ವಿತರಿಸಿದ್ದಾರೆ.
ಹೊನ್ನಾಳಿ ಪಟ್ಟಣದ ತಮ್ಮ ಮನೆಯ ಮುಂದೆ ಇಡ್ಲಿ ಮಾಡಿದ ಸಚಿವರು ಇದನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು, ವೈದ್ಯಕೀಯ ಸಿಬ್ಬಂದಿಗಳಿಗೆ ವಿತರಿಸಿದ್ದಾರೆ.
ಬಸವ ಜಯಂತಿ ದಿನ ಸೋಂಕಿತರಿಗೆ ಹೋಳಿಗೆ ತಯಾರಿಸಿ ಸಿಹಿ ಊಟ ಹಾಕಿಸಿದ್ದ ಶಾಸಕರು ಈಗ ಉಪಾಹಾರ ನೀಡಿದ್ದಾರೆ. ತಮ್ಮ ಸ್ವ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಶಾಸಕರು ಈಗ ಆಕ್ಸಿಜನ್ ಪೂರೈಕೆ ಸೇರಿದಂತೆ ಆಸ್ಪತ್ರೆಗೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.