Select Your Language

Notifications

webdunia
webdunia
webdunia
webdunia

ದೇಶದ್ರೋಹಿಗಳನ್ನು ದೇಶಬಿಟ್ಟು ಕಳಿಸಬೇಕು-ಶಾಸಕ ಬಸವರಾಜ್ ದಡೇಸಗೂರು ಕಿಡಿ

ದೇಶದ್ರೋಹಿಗಳನ್ನು ದೇಶಬಿಟ್ಟು ಕಳಿಸಬೇಕು-ಶಾಸಕ ಬಸವರಾಜ್ ದಡೇಸಗೂರು ಕಿಡಿ
ಕೊಪ್ಪಳ , ಬುಧವಾರ, 26 ಫೆಬ್ರವರಿ 2020 (11:05 IST)
ಕೊಪ್ಪಳ : ಇತ್ತೀಚೆಗೆ ದೇಶದ್ರೋಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ  ದೇಶದ್ರೋಹಿಗಳ ವಿರುದ್ಧ ಶಾಸಕ ಬಸವರಾಜ್ ದಡೇಸಗೂರು ಕಿಡಿಕಾರಿದ್ದಾರೆ.


ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿ ಘೋಷಣೆ ಕೂಗುವವರು ದೇಶದಲ್ಲಿರಬಾರದು. ದೇಶದ್ರೋಹಿಗಳನ್ನು ದೇಶಬಿಟ್ಟು ಕಳಿಸಬೇಕು. ಅಂಥವರನ್ನು 130 ಕೋಟಿ ಜನ ದೇಶದಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅಮೂಲ್ಯ, ಆರ್ದ್ರಾ ಎಂಬ ಯುವತಿಯರು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರೆ, ಇನ್ನೂ ಕೆಲವು ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ  ಪಾಕ್ ಪರವಾಗಿ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಇಂತಹ ದೇಶದ್ರೋಹಿಗಳ ವಿರುದ್ಧ ದೇಶದೆಲ್ಲೆಡೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆ; ಸಾರಿಗೆ ದರ ಹೆಚ್ಚಿಸಿದ ನಿಗಮಗಳು