Select Your Language

Notifications

webdunia
webdunia
webdunia
webdunia

ತಪ್ಪಿದ ಸಚಿವ ಸ್ಥಾನ: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನಡೀತಾ ಗುಪ್ತ ಸಭೆ?

ತಪ್ಪಿದ ಸಚಿವ ಸ್ಥಾನ: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನಡೀತಾ ಗುಪ್ತ ಸಭೆ?
ಬೆಂಗಳೂರು , ಮಂಗಳವಾರ, 20 ಆಗಸ್ಟ್ 2019 (19:32 IST)
ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆದಿದ್ದು, ಸಚಿವ ಸ್ಥಾನ ಕೈ ತಪ್ಪಿದ ಬಿಜೆಪಿ ಹಿರಿಯ ನಾಯಕರು ಬಂಡಾಯ ಬಾವುಟ ಹಾರಿಸೋ ಲಕ್ಷಣಗಳು ಗೋಚರಿಸಿವೆ.

ಸಚಿವ ಸ್ಥಾನ ಸಿಗದ ಶಾಸಕರು ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಸಭೆ ಸೇರಿ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರುಪಾಕ್ಷಪ್ಪ, ಮಾಜಿ ಶಾಸಕ ಶ್ರೀಮಂತ ಪಾಟೀಲ್, ಮಾಜಿ ಶಾಸಕ ಕಿರಣ್ ಪಾಟೀಲ್ ಹಾಗೂ ಬಾಲಚಂದ್ರ ಜಾರಕಿಹೊಳಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಈ ಕುರಿತು ಹೇಳಿರೋ ಶಾಸಕರು ಕೇವಲ ಊಟ ಮಾಡೋದಕ್ಕೆ ಮಾತ್ರ ಬಂದಿದ್ದಾಗಿ ಹೇಳಿದ್ದು, ಬಿ.ಎಸ್.ಯಡಿಯೂರಪ್ಪರಿಗೆ ತಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.

ಆದರೆ ಬಂಡಾಯ ಶಾಸಕರ ಸಭೆ ವಿಷಯ ಪಡೆದಿರೋ ಸಿಎಂ ಯಡಿಯೂರಪ್ಪ, ಬಾಲಚಂದ್ರ ಜಾರಕಿಹೊಳಿಯವರನ್ನ ಭೇಟಿ ಮಾಡಲು ಕರೆ ಮಾಡಿದ್ದಾರೆ ಎನ್ನಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ಇಳಿದ ಬಳಿಕ ಬರ ಪರಿಹಾರ ನೀಡಿದ ಕೇಂದ್ರ: ಎಷ್ಟೆಷ್ಟು ಕೋಟಿ ಗೊತ್ತಾ?