Select Your Language

Notifications

webdunia
webdunia
webdunia
webdunia

RCB: ಆರ್ ಸಿಬಿ ಆಟಗಾರರಿಗೆ ಸನ್ಮಾನಕ್ಕಿಂತ ಅಧಿಕಾರಿಗಳು, ಸಚಿವರ ಮಕ್ಕಳಿಗೆ ಸೆಲ್ಫೀ ತೆಗೆಯುವುದೇ ಹೆಚ್ಚಾಯ್ತು

RCB

Krishnaveni K

ಬೆಂಗಳೂರು , ಗುರುವಾರ, 5 ಜೂನ್ 2025 (10:33 IST)
ಬೆಂಗಳೂರು: ಐಪಿಎಲ್ 2025 ಫೈನಲ್ ಗೆದ್ದು ಬೆಂಗಳೂರಿಗೆ ಬಂದ ಆರ್ ಸಿಬಿ ಆಟಗಾರರಿಗೆ ಸನ್ಮಾನಕ್ಕಿಂತ ಸಚಿವರು, ಅಧಿಕಾರಿಗಳ ಮಕ್ಕಳು, ಮೊಮ್ಮಕ್ಕಳಿಗೆ ಫೋಟೋ, ಆಟೋಗ್ರಾಫ್ ಪಡೆಯುವುದೇ ಮುಖ್ಯವಾದಂತಿತ್ತು.

ಆಟಗಾರರನ್ನು ವೇದಿಕೆ ಮೇಲೆ ಕರೆತಂದಾಗ ಅಲ್ಲಿ ಸಾಕಷ್ಟು ಜನ ಸೇರಿದ್ದರು. ಹಲವರು ಅನಗತ್ಯವಾಗಿ ವೇದಿಕೆಯಲ್ಲಿದ್ದರು. ಆಟಗಾರರು ವೇದಿಕೆಯಲ್ಲಿ ಕೂತಾಗ ಯಾರೆಲ್ಲವೂ ವೇದಿಕೆಗೆ ಬಂದು ಆಟಗಾರರನ್ನು ಮುತ್ತಿಕೊಳ್ಳುತ್ತಿದ್ದರು.

ವಿಶೇಷವಾಗಿ ಆರ್ ಸಿಬಿ ಜೆರ್ಸಿ ಹಾಕಿಕೊಂಡು ಪ್ರಭಾವಿಗಳ ಮೊಮ್ಮಕ್ಕಳು ವಿರಾಟ್ ಕೊಹ್ಲಿ ಬಳಿ ಸೆಲ್ಫೀ, ಆಟೋಗ್ರಾಫ್ ಗಾಗಿ ಮುತ್ತಿಗೆ ಹಾಕಿದ್ದರು. ಇನ್ನು ಕೆಲವರು ವೇದಿಕೆ ಮೇಲಿಟ್ಟಿದ್ದ ಟ್ರೋಫಿ ಬಳಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು.

ಒಟ್ಟಾರೆ ಸನ್ಮಾನದ ವೇದಿಕೆಯಲ್ಲಿ ಆಟಗಾರರನ್ನು ಕೂರಿಸಿಕೊಂಡು ದೊಂಬರಾಟವೇ ನಡೆದಿತ್ತು. ಆಟಗಾರರು ವೇದಿಕೆಯಲ್ಲಿ ಕೂತಿದ್ದರು ಪ್ರೇಕ್ಷಕರಿಗೆ ಅವರನ್ನು ಕಾಣುತ್ತಲೇ ಇರುತ್ತಿರಲಿಲ್ಲ. ಹೀಗಾಗಿ ಆಟಗಾರರನ್ನು ವಿಧಾನಸೌಧಕ್ಕೆ ಕರೆಸಿದ್ದೇ ಪ್ರಭಾವಿಗಳ ಮಕ್ಕಳಿಗೆ ಸೆಲ್ಫೀ, ಆಟೋಗ್ರಾಫ್ ಪಡೆಯುವ ತೆವಲಿಗಾಗಿ ಎಂದು ಸಾರ್ವಜನಿಕರು ಕಟುವಾಗಿ ಟೀಕಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂಬಮೇಳದಲ್ಲೂ ಕಾಲ್ತುಳಿತ ಆಗಿಲ್ವಾ ಎಂದ ಸಿದ್ದರಾಮಯ್ಯ: ಆಗ ನೀವು ಟೀಕಿಸಿಲ್ವಾ ಎಂದ ಪಬ್ಲಿಕ್