Select Your Language

Notifications

webdunia
webdunia
webdunia
webdunia

ಮಸೀದಿ ಧ್ವಂಸ ಮಾಡಿ, ದೇವಸ್ಥಾನ ನಿರ್ಮಾಣ ಮಾಡಬೇಕೆಂದ ಸಚಿವ

ಮಸೀದಿ ಧ್ವಂಸ ಮಾಡಿ, ದೇವಸ್ಥಾನ ನಿರ್ಮಾಣ ಮಾಡಬೇಕೆಂದ ಸಚಿವ
ಶಿವಮೊಗ್ಗ , ಮಂಗಳವಾರ, 11 ಆಗಸ್ಟ್ 2020 (23:28 IST)
ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೆ ವಿವಾದಿತ ಹೇಳಿಕೆಯನ್ನು ಪುನರುಚ್ಛರಿಸಿದ್ಧಾರೆ.


ಕಾಶಿ ಮಥುರಾದಲ್ಲಿರುವ ಮಸೀದಿ ಧ್ವಂಸ ಮಾಡಿ, ದೇವಸ್ಥಾನ ನಿರ್ಮಿಸಬೇಕೆಂಬ ತಮ್ಮ ನಿಲುವಿಗೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ಧಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ ಬಳಿಕ, ಇದೀಗ ಈಶ್ವರಪ್ಪ ತಮ್ಮದೇ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಛಾರ ಮಾಡಿದ್ದಾರೆ.

ಜೈಲಿಗೆ ಹೋಗೋದಕ್ಕೂ ಸಿದ್ಧ, 100 ಸಲ ಬಂಧನಕ್ಕೆ ಒಳಗಾಗಲು ಸಿದ್ಧ ಇದ್ದೇನೆ ಎಂದು ಈಶ್ವರಪ್ಪ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದಿಂದ ಬಿಜೆಪಿ ಸಂಸದರಿಗೆ ಬಾಂಬ್ ಹಾಕುವ ಬೆದರಿಕೆ