Publish Date: Tue, 11 Aug 2020 (18:54 IST)
Updated Date: Tue, 11 Aug 2020 (18:56 IST)
ಮನುಕುಲ ನಾಚಿಸುವಂತಹ ಅಮಾನವೀಯ ಘಟನೆ ನಡೆದಿದ್ದು ವರದಿಯಾಗಿದೆ.
ಹೆತ್ತ ತಾಯಿಯನ್ನೇ ಕಾಮುಕ ಮಗನೊಬ್ಬ ಪದೇ ಪದೇ ಕಾಮದಾಟಕ್ಕೆ ಕರೆಯುತ್ತಿದ್ದ ಎನ್ನಲಾಗಿದೆ.
ಹಲವು ಬಾರಿ ಮನೆಮಂದಿ ಬುದ್ಧಿವಾದ ಹೇಳಿದ್ದರು. ಅಲ್ಲದೇ ಆತನ ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿದ್ದರು.
ಆದರೆ ಬುದ್ದಿ ಹೇಳಿದರೂ ಕೇಳದ ಮಗ ಬಸವರಾಜ್ (25) ತನ್ನ ತಾಯಿಯನ್ನು ಹಿಡಿದು ಮಲಗಲು ಕರೆದಿದ್ದಾನೆ ಎನ್ನಲಾಗಿದೆ.
ತಾಯಿ ಮಗನಿಗೆ ಬೈಯುತ್ತಿರುವಾಗ ಮನೆಗೆ ಬಂದ ಮತ್ತಿಬ್ಬರು ಮಕ್ಕಳು ಕಾಮುಕ ಸಹೋದರನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿಯ ಚೌಡಾಪುರದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ.