Select Your Language

Notifications

webdunia
webdunia
webdunia
webdunia

ಆಗಸ್ಟ್ 15 ರಂದು ಪೊಲೀಸ್ ಮೈದಾನಕ್ಕೆ ಪ್ರವೇಶ ಇಲ್ಲ

ಆಗಸ್ಟ್ 15 ರಂದು ಪೊಲೀಸ್ ಮೈದಾನಕ್ಕೆ ಪ್ರವೇಶ ಇಲ್ಲ
ಚಿತ್ರದುರ್ಗ , ಸೋಮವಾರ, 10 ಆಗಸ್ಟ್ 2020 (19:31 IST)
ಪ್ರತಿವರ್ಷ ಆಗಸ್ಟ್ 15 ಬಂದರೆ ಸಾಕು ಎಲ್ಲ ಸಾರ್ವಜನಿಕರು, ಶಾಲಾ ಕಾಲೇಜ್ ಗಳ ವಿದ್ಯಾರ್ಥಿಗಳು ಪೊಲೀಸ್ ಮೈದಾನಕ್ಕೆ ಬರುತ್ತಿದ್ದರು. ಆದರೆ ಈ ಬಾರಿ ನೋ ಎಂಟ್ರಿ.

ಕೋವಿಡ್-19 ಸೋಂಕು ಇರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ  ಚಿತ್ರದುರ್ಗ ಜಿಲ್ಲಾ ಆಡಳಿತದಿಂದ ಆಗಸ್ಟ್ 15 ರಂದು  ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಾವಯತು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಆಯೋಜಿಸಲಾಗಿದೆ.

ಆದರೆ ಈ ಕಾರ್ಯಕ್ರಮದಲ್ಲಿ ಆಹ್ವಾನಿತರನ್ನು ಹೊರತುಪಡಿಸಿ ಇತರೆ ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಬಾರದು. 

ಕಾರ್ಯಕ್ರಮದ ವೀಕ್ಷಣೆಗೆ ದೂರದರ್ಶನ, ಕೇಬಲ್ ಟಿ.ವಿ, ಆಕಾಶವಾಣಿ ಹಾಗೂ ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತ ಎಸ್.ಮನ್ನಿಕೇರಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ : ಸಚಿವ ಹೇಳಿದ್ದೇನು?