Select Your Language

Notifications

webdunia
webdunia
webdunia
webdunia

ಸಚಿವ ಶಿವಳ್ಳಿ ಇನ್ನಿಲ್ಲ

ಸಚಿವ ಶಿವಳ್ಳಿ ಇನ್ನಿಲ್ಲ
ಹುಬ್ಬಳ್ಳಿ , ಶುಕ್ರವಾರ, 22 ಮಾರ್ಚ್ 2019 (15:41 IST)
ರಾಜ್ಯದ ಪೌರಾಡಳಿತ ಸಚಿವರಾದ ಸಿ.ಎಸ್.ಶಿವಳ್ಳಿ ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 1.30ರ ಹೊತ್ತಿಗೆ ನಿಧನರಾದರು.

ಕುಂದಗೋಳ ಶಾಸಕರಾಗಿದ್ದ ಸಿ.ಎಸ್.ಶಿವಳ್ಳಿ, ಪೌರಾಡಳಿತ ಖಾತೆಯ ಸಚಿವರಾಗಿದ್ದರು. ಧಾರವಾಡದಲ್ಲಿ ನಡೆದಿದ್ದ ಕಟ್ಟಡ ದುರಂತದ ಸಂದರ್ಭದಲ್ಲಿದ್ದು, ಪರಿಹಾರ ಉಸ್ತುವಾರಿ ನೋಡಿಕೊಂಡಿದ್ದರು.

ಈ ಹಿಂದೆ ಕೂಡ ಶಿವಳ್ಳಿಯವರಿಗೆ ಹೃದಯಾಘಾತ ಆಗಿತ್ತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೂರು ಬಾರಿ ಶಾಸಕರಾಗಿದ್ದ ಶಿವಳ್ಳಿ ಅಗಲಿಕೆ, ಅವರ ಕುಟುಂಬ ವರ್ಗ ಹಾಗೂ ಕ್ಷೇತ್ರದ ಜನರಲ್ಲಿ ತುಂಬಾ ನೋವನ್ನುಂಟು ಮಾಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಹೋಳಿ ಹಬ್ಬದಂದು ಘರ್ಷಣೆ: ಐವರು ಅರೆಸ್ಟ್