Publish Date: Thu, 14 Mar 2019 (19:38 IST)
Updated Date: Thu, 14 Mar 2019 (19:39 IST)
ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲು ಆಗಿದ್ದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ.
ತೀವ್ರವಾದಂತಹ ಉಸಿರಾಟದ ಸಮಸ್ಯೆಗಳಿಂದ ಶರಣೆ ಮಾತೆ ಮಹಾದೇವಿ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಬಹು ಅಂಗಾಗಳ ವೈಫಲ್ಯವೂ ಅವರನ್ನು ಕಾಡುತ್ತಿತ್ತು. ಮಧುಮೇಹ, ರಕ್ತದೊತ್ತಡವೂ ಮಾತೆ ಮಹಾದೇವಿಯರ ಅನಾರೋಗ್ಯಕ್ಕೆ ಕಾರಣವಾಗಿದ್ದವು.