Select Your Language

Notifications

webdunia
webdunia
webdunia
webdunia

ಬಿಜೆಪಿ ಜನರ ಮುಂದೆ ಬೆತ್ತಲೆಯಾಗಿದೆ ಎಂದ ಸಚಿವ!

ಬಿಜೆಪಿ ಜನರ ಮುಂದೆ ಬೆತ್ತಲೆಯಾಗಿದೆ ಎಂದ ಸಚಿವ!
ಶಿವಮೊಗ್ಗ , ಭಾನುವಾರ, 24 ಫೆಬ್ರವರಿ 2019 (15:28 IST)
ರಾಜ್ಯದಲ್ಲಿ ಕಳೆದ ಎಂಟು ತಿಂಗಳಿಂದ ಮೈತ್ರಿ ಸರ್ಕಾರ ಕೆಡವಲು ಹೋಗಿ ಬಿಜೆಪಿ ಮುಗ್ಗರಿಸುತ್ತಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಬಿಜೆಪಿ ಪದೇ ಪದೇ ಮುಗ್ಗರಿಸುತ್ತಿದೆ ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1000 ಕೋಟಿ ರೂ. ಯೋಜನೆ ಶಿವಮೊಗ್ಗದಲ್ಲಿ ನಡೆಯಲಿದೆ. ಕಳೆದ ಎಂಟು ತಿಂಗಳಲ್ಲಿ ಸ್ಮಾರ್ಟ್ ಸಿಟಿ ಹುದ್ದೆಗೆ ನೇಮಕಾತಿ ಮಾಡಿಕೊಂಡು ಕಾಮಗಾರಿ ತ್ವರಿತವಾಗಿ ನಡೆಸಲಾಗುತ್ತಿದೆ. ಈಗಾಗಲೇ 810 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ವಿವಿಧ ಕಾಮಗಾರಿಗಳಿಗೆ ವಿವಿಧ ರೀತಿ ಟೈಂ ಬಾಂಡ್ ಇದೆ. ಸ್ಮಾರ್ಟ್ ಸಿಟಿ ಎಂಡಿ ನೇಮಕಾತಿ ಮಾಡಲಾಗುವುದು. ಅರ್ಬನ್ ಡೆವೆಲಪ್ಮೆಂಟ್ ಬೋರ್ಡ್ ಗೆ ಅಧ್ಯಕ್ಷರನ್ನ ಸದ್ಯದಲ್ಲಿಯೇ ನೇಮಕಾತಿ ಮಾಡಲಾಗುವುದು ಎಂದರು.

ಮೈತ್ರಿ ಸರ್ಕಾರ ಕೆಡವಲು ಹೋಗಿ ಬಿಜೆಪಿ ಜನರ ಮುಂದೆ ಬೆತ್ತಲಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರುದ್ದ ಬಿಜೆಪಿ ನಡೆದುಕೊಂಡಿದೆ. ಮೋದಿ ಮತ್ತು ಅಮಿತ್ ಷಾ ಮಾರ್ಗದರ್ಶನದಲ್ಲಿ ಆಪರೇಷನ್ ಕಮಲ ನಡೆದಿದೆ ಎಂದು ದೂರಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರದಿಂದ ದಲಿತ ಉದ್ದಿಮೆದಾರರಿಗೆ ಅನ್ಯಾಯ; ಆರೋಪ