Select Your Language

Notifications

webdunia
webdunia
webdunia
webdunia

ಏರೋ ಇಂಡಿಯಾದಲ್ಲಿ ಬೆಂಕಿ ಪ್ರಕರಣ; ಸಮಗ್ರ ತನಿಖೆಗೆ ಕ್ರಮ ಎಂದ ಗೃಹಸಚಿವ

ಏರೋ ಇಂಡಿಯಾದಲ್ಲಿ ಬೆಂಕಿ ಪ್ರಕರಣ; ಸಮಗ್ರ ತನಿಖೆಗೆ ಕ್ರಮ ಎಂದ ಗೃಹಸಚಿವ
ಕಲಬುರಗಿ , ಶನಿವಾರ, 23 ಫೆಬ್ರವರಿ 2019 (17:31 IST)
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಯಲಹಂಕ ವಾಯುನೆಲೆಯ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಬೆಂಕಿ ಅನಾಹುತದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ತನಿಖೆ ನಂತರ ತಪ್ಪಿಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದುಬಯಲು ಪ್ರದೇಶ, ಜತೆಗೆ ಒಣಹುಲ್ಲು ಇದ್ದ ಕಾರಣದಿಂದ ದುರಂತ ಸಂಭವಿಸಿದೆ. ಇಂತಹ ಘಟನೆ ನಡೆದಿರುವುದು ನೋವು ತಂದಿದೆ ಎಂದರು.

ಜೀವರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ ಅವರಿಂದ ಮಾಹಿತಿ ಪಡೆದಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ಎಂ.ಬಿ.ಪಾಟೀಲ್  ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಔರಾದಕರ ಸಮಿತಿ ವರದಿ ಅನುಷ್ಠಾನಕ್ಕೆ ಸಿಎಂ ಒಪ್ಪಿಗೆ