Select Your Language

Notifications

webdunia
webdunia
webdunia
webdunia

ಕೈ ಸಚಿವರ ರಾಜೀನಾಮೆ ವಿಷಯ: ಸಚಿವ ಹೇಳಿದ್ದೇನು?

ಕೈ ಸಚಿವರ ರಾಜೀನಾಮೆ ವಿಷಯ: ಸಚಿವ ಹೇಳಿದ್ದೇನು?
ಚಾಮರಾಜನಗರ , ಬುಧವಾರ, 23 ಜನವರಿ 2019 (18:56 IST)
ಕಾಂಗ್ರೆಸ್ ನ ಕೆಲವು ಸಚಿವರಿಂದ ರಾಜೀನಾಮೆ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಹೈಕಮಾಂಡ್ ಸೂಚಿಸಿದರೆ ನಾನು ನಾಳೆಯೇ ರಾಜೀನಾಮೆ ನೀಡಲು ಸಿದ್ಧ. ಹೀಗಂತ ಹಿಂದುಳಿದ ವರ್ಗಗಳ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ.

ಸಚಿವ ಸ್ಥಾನ ಕೊಟ್ಟಿರೋದೇ ಹೈಕಮಾಂಡ್. ಅವರು ಹೇಳಿದರೆ ಬಿಟ್ಟು ಕೊಡ್ತೀನಿ. ನಾನು ಹೈಕಮಾಂಡ್ ಮಾತಿಗೆ ಬದ್ಧ ಎಂದು ಅವರು ಹೇಳಿದ್ದಾರೆ.

ಸಚಿವ ಸ್ಥಾನ ಬಿಟ್ಟು ಕೊಡುವುದಕ್ಕೆ ನನಗೆ ಯಾವ ಅಸಮಾಧಾನವೂ ಇಲ್ಲ ಎಂದಿದ್ದಾರೆ.
ಇನ್ನು ಶಾಸಕರಾದ ಆನಂದ್ ಸಿಂಗ್-ಗಣೇಶ್ ಹೊಡೆದಾಟದ ಬಗ್ಗೆ ನನಗೆ ಗೊತ್ತಿಲ್ಲ ಎಂದ ಅವರು, ನಾನಾಗ ನನ್ನ ರೂಮಿನಲ್ಲಿದ್ದೆ ಎಂದು ಚಾಮರಾಜನಗರದಲ್ಲಿ ಹಿಂದುಳಿದ ವರ್ಗಗಳ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಮಿಮ್ಸ್ ನಲ್ಲಿ ಪ್ರತಿಭಟನೆ: ಬೇಡಿಕೆ ಏನು?