Select Your Language

Notifications

webdunia
webdunia
webdunia
Saturday, 12 April 2025
webdunia

ಸ್ವಾಮೀಜಿ ಸಾವಿನಲ್ಲೂ ರಾಜಕೀಯ ಮಾಡ್ತೀರಲ್ಲಾ? ನಟಿ ರಮ್ಯಾಗೆ ಟಾಂಗ್

ಶಿವಕುಮಾರ ಸ್ವಾಮೀಜಿ
ಬೆಂಗಳೂರು , ಮಂಗಳವಾರ, 22 ಜನವರಿ 2019 (10:12 IST)
ಬೆಂಗಳೂರು: ಮೊನ್ನೆಯಷ್ಟೇ ತಮಿಳು ನಟ ಧನುಷ್ ಹೊಗಳಿ ಟ್ರೋಲ್ ಗೊಳಗಾಗಿದ್ದ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನದ ಬಗ್ಗೆ ಮಾಡಿರುವ ರಿಟ್ವೀಟ್ ಮೂಲಕ ಟ್ರೋಲ್ ಗೊಳಗಾಗಿದ್ದಾರೆ.


ತಾವಾಗಿಯೇ ಒಂದೇ ಒಂದು ಶಬ್ಧವನ್ನೂ ಸ್ವಾಮೀಜಿ ಅಗಲಿಕೆಯ ಬಗ್ಗೆ ಬರೆಯದೇ ಕಾಂಗ್ರೆಸ್ ಪಕ್ಷ ಮಾಡಿದ ಟ್ವೀಟ್ ನ್ನೇ ರಿಟ್ವೀಟ್ ಮಾಡಿದ್ದಕ್ಕೆ ರಮ್ಯಾ ಬೈಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆ ಟ್ವೀಟ್ ಕೂಡಾ ಕಾಂಗ್ರೆಸ್ ನ ರಾಜಕಾರಣಿಗಳು ಶಿವಕುಮಾರಸ್ವಾಮೀಜಿಗಳನ್ನು ಭೇಟಿಯಾದ ಕ್ಷಣಗಳ ಫೋಟೋ ಹೊಂದಿತ್ತು.

ಹೀಗಾಗಿ ಸಾವಿನಲ್ಲೂ ರಾಜಕೀಯ ಬುದ್ಧಿ ಬಿಡಲ್ವಲ್ಲಾ ನೀವು? ನಿಮಗೆ ಸ್ವಂತವಾಗಿ ಸ್ವಾಮೀಜಿ ಬಗ್ಗೆ ಒಂದೆರಡು ವಾಕ್ಯ ಬರೆಯಲಿಕ್ಕಾಗಲ್ವಾ? ಎಂದು ಟ್ವಿಟರಿಗರು ರಮ್ಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧಗಂಗಾ ಶ್ರೀಗಳ ಕ್ರಿಯಾಸಮಾಧಿಯ ಹೇಗಿದೆ ಗೊತ್ತಾ?